من خلقني؟ ولماذا؟
المطوية تتناول مفهوم الخلق والغرض من الحياة، متسائلة عن منشأ الكون والإنسان والقوانين التي تحكمهما. تشرح وجود خالق واحد مستحق للعبادة، وتبرز الدلائل على عظمة الخالق من خلال الطبيعة وأحكام الكون. كما تستعرض المطوية صفات الله وأهمية الوحي في توجيه البشر لعبادة الله وحده واتباع شرعه. وتؤكد على أن الإسلام هو الدين الحق، وتحث على الدخول فيه واعتناقه للحصول على السعادة الحقيقية في الدنيا والآخرة.
ಪ್ರತಿಯೊಂದು ವಸ್ತುವು ಸೃಷ್ಟಿಕರ್ತನ ಅಸ್ತಿತ್ವವನ್ನು ಸೂಚಿಸುತ್ತದೆ.
ನನ್ನನ್ನು ಯಾರು ಸೃಷ್ಟಿಸಿದರು? ಮತ್ತು ಏಕೆ?
ಯಾರು ಆಕಾಶ ಮತ್ತು ಭೂಮಿಯನ್ನು ಮತ್ತು ಅದರಲ್ಲಿರುವ ಎಲ್ಲಾ ದೊಡ್ಡ ಜೀವಿಗಳನ್ನು ಸೃಷ್ಟಿಸಿದರು?
ಭೂಮಿ ಮತ್ತು ಆಕಾಶದಲ್ಲಿ ಸೂಕ್ಷ್ಮ ಹಾಗೂ ನಿಖರವಾದ ವ್ಯವಸ್ಥೆಯನ್ನು ರಚಿಸಿದವರಾರು?
ಮನುಷ್ಯನನ್ನು ಸೃಷ್ಟಿಸಿದವರಾರು, ಅವನಿಗೆ ಶ್ರವಣ, ದೃಷ್ಟಿ ಮತ್ತು ಬುದ್ಧಿವಂತಿಕೆಯನ್ನು ನೀಡಿದವರಾರು ಮತ್ತು ಅವನಿಗೆ ಜ್ಞಾನವನ್ನು ಪಡೆಯಲು ಮತ್ತು ಸತ್ಯತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದವರಾರು?
ನಿಮ್ಮ ದೇಹ ಮತ್ತು ಇತರ ಜೀವಿಗಳ ದೇಹದಲ್ಲಿರುವ ನಿಖರವಾದ ರಚನೆಗಳನ್ನು ನೀವು ಹೇಗೆ ವಿವರಿಸುತ್ತೀರಿ? ಈ ರಚನೆಗಳನ್ನು ಯಾರು ಸೃಷ್ಟಿಸಿದರು?
ಈ ಮಹಾನ್ ಪ್ರಪಂಚವು ನಿಖರವಾಗಿ ನಿಯಂತ್ರಿಸುವ ತನ್ನ ನಿಯಮಗಳೊಂದಿಗೆ ಇಷ್ಟು ವರ್ಷಗಳವರೆಗೆ ಕ್ರಮಬದ್ಧವಾಗಿ ಮತ್ತು ಸ್ಥಿರವಾಗಿ ಹೇಗೆ ನಡೆಯುತ್ತಿದೆ?
ಈ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆಗಳನ್ನು (ಜೀವನ ಮತ್ತು ಮರಣ, ಜೀವಿಗಳ ಸಂತಾನೋತ್ಪತ್ತಿ, ಹಗಲು ರಾತ್ರಿ, ಋತುಗಳ ಬದಲಾವಣೆ, ಇತ್ಯಾದಿ)ಸ್ಥಾಪಿಸಿದವರು ಯಾರು?
ಈ ವಿಶ್ವವು ತನ್ನನ್ನು ತಾನೇ ಸೃಷ್ಟಿಸಿಕೊಂಡಿತು, ಅಥವಾ ಏನೂ ಇಲ್ಲದ ಸ್ಥಿತಿಯಿಂದ ಉದ್ಭವಿಸಿತು, ಇಲ್ಲವೇ ಇದು ಅದೃಷ್ಟವಶಾತ್ ಸೃಷ್ಟಿಯಾಯಿತು ಎಂದು ನೀವು ಹೇಳುತ್ತೀರಾ?
ಮಾನವರು ತಾವು ನೋಡದ ವಸ್ತುಗಳ ಅಸ್ತಿತ್ವವನ್ನು (ಉದಾಹರಣೆಗೆ: ಗ್ರಹಿಕೆ, ಮನಸ್ಸು, ಆತ್ಮ, ಭಾವನೆಗಳು, ಪ್ರೀತಿ) ಹೇಗೆ ನಂಬುತ್ತಾರೆ? ಅವುಗಳ ಪರಿಣಾಮಗಳನ್ನು ನೋಡುವುದರಿಂದಲೇ ಅವರು ಅವುಗಳ ಅಸ್ತಿತ್ವವನ್ನು ನಂಬುವುದಿಲ್ಲವೇ? ಈ ವಿಶಾಲವಾದ ವಿಶ್ವದ ಸೃಷ್ಟಿಕರ್ತನ ಅಸ್ತಿತ್ವವನ್ನು ಮಾನವರು ಹೇಗೆ ನಿರಾಕರಿಸುತ್ತಾರೆ, ಅವನ ಸೃಷ್ಟಿಗಳ ಗುಣಲಕ್ಷಣಗಳು ಮತ್ತು ಅವನ ಕರುಣೆಯನ್ನು ಅವರು ನೋಡುತ್ತಿರುವಾಗ?
ಈ ಕಟ್ಟಡವನ್ನು ಯಾರೂ ರಚಿಸದೆ ಸ್ವಂತವಾಗಿ ಅಸ್ತಿತ್ವಕ್ಕೆ ಬಂದಿದೆ ಅಥವಾ ಶೂನ್ಯವು ಈ ಕಟ್ಟಡವನ್ನು ಅಸ್ತಿತ್ವಕ್ಕೆ ತಂದಿದೆ ಎಂದು ಯಾವುದೇ ಬುದ್ಧಿವಂತ ವ್ಯಕ್ತಿಗೆ ಹೇಳಿದರೆ ಎಂದಿಗೂ ಅವನು ಈ ಮಾತನ್ನು ಸ್ವೀಕರಿಸುವುದಿಲ್ಲ ಪರಿಸ್ಥಿತಿ ಹೀಗಿರುವಾಗ ಈ ವಿಶಾಲ ಜಗತ್ತು ಯಾವುದೇ ಸೃಷ್ಟಿಕರ್ತನಿಲ್ಲದೆ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳುವವರ ಮಾತನ್ನು ಅವನು ಹೇಗೆ ಸ್ವೀಕರಿಸುತ್ತಾನೆ ಜಗತ್ತಿನ ನಿಖರವಾದ ಈ ವ್ಯವಸ್ಥೆ ಆಕಸ್ಮಿಕವಾಗಿ ಅಸ್ಥಿತ್ವಕ್ಕೆ ಬಂದಿದೆ ಎಂದು ಓರ್ವ ಬುದ್ಧಿವಂತ ವ್ಯಕ್ತಿಗೆ ಹೇಳಿದರೆ ಅವನು ಇದನ್ನು ಹೇಗೆ ಸ್ವೀಕರಿಸಲಿಕ್ಕೆ ಸಾಧ್ಯ?
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: (ಇವರು ಒಬ್ಬ ಸೃಷ್ಟಿಕರ್ತನಿಲ್ಲದೆ ಸ್ವಯಂ ಹುಟ್ಟಿಕೊಂಡರೇ? ಅಥವಾ ಇವರು ತಾವೇ ತಮ್ಮ ಸೃಷ್ಟಿಕರ್ತರೇ? ಅಥವಾ ಭೂಮಿ- ಆಕಾಶಗಳನ್ನು ಇವರು ಸೃಷ್ಟಿಸಿದ್ದಾರೆಯೇ? ವಾಸ್ತವದಲ್ಲಿ ಇವರಿಗೆ ನಂಬಿಕೆ ಇಲ್ಲ). [32 : 52].
ಸರ್ವಶಕ್ತ ಅಲ್ಲಾಹನು
ಒಬ್ಬನೇ ಒಬ್ಬ ಸೃಷ್ಟಿಕರ್ತ ಮತ್ತು ಪಾಲಕನಿದ್ದಾನೆ. ಅವನು ಅನೇಕ ಶ್ರೇಷ್ಠ ಹೆಸರುಗಳು ಮತ್ತು ಗುಣಗಳನ್ನು ಹೊಂದಿದ್ದಾನೆ, ಅದು ಅವನ ಪರಿಪೂರ್ಣತೆಯನ್ನು ಸೂಚಿಸುತ್ತದೆ. ಈ ಹೆಸರುಗಳಲ್ಲಿ ಕೆಲವು: ಸೃಷ್ಟಿಕರ್ತ, ಕರುಣಾಮಯಿ, ರಕ್ಷಕ, ದಯಾಳು, ಮತ್ತು "ಅಲ್ಲಾಹ್" ಎಂಬುದು ಅವನ ಅತ್ಯಂತ ಪ್ರಸಿದ್ಧ ಹೆಸರು. ಅದರ ಅರ್ಥ: ಆರಾಧಿಸಲು ಏಕೈಕ ಅರ್ಹನಾದವನು, ಅವನಿಗೆ ಯಾರೂ ಸಮಾನರಿಲ್ಲ.
ಅಲ್ಲಾಹನು ಕುರ್ ಆನ್ನಿನಲ್ಲಿ ಈ ರೀತಿ ಹೇಳಿದ್ದಾನೆ([1]): ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ. [112: 1-4].
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹ್ ಚಿರಂತನು, ಸ್ವಯಂ ಜೀವಂತನು, ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾದಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆವಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನು ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಳಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವಶ್ರೇಷ್ಠನೂ ಆಗಿರುತ್ತಾನೆ. [2 : 255].
ಸರ್ವಶಕ್ತಿವಂತ ಅಲ್ಲಾಹನ ಗುಣಲಕ್ಷಣಗಳು
ಭೂಮಿಯನ್ನು ಸೃಷ್ಟಿಸಿ ಅದನ್ನು ನಮ್ಮ ಬಳಕೆಗೆ ಒದಗಿಸಿದವನು ಅಲ್ಲಾಹನೇ. ಅವನೇ ಆಕಾಶಗಳನ್ನು ಮತ್ತು ಅದರಲ್ಲಿರುವ ಎಲ್ಲಾ ಅದ್ಭುತ ಸೃಷ್ಟಿಗಳನ್ನು ಸೃಷ್ಟಿಸಿದನು. ಸೂರ್ಯ, ಚಂದ್ರ, ರಾತ್ರಿ ಮತ್ತು ಹಗಲುಗಳನ್ನು ಒಂದು ನಿಖರವಾದ ವ್ಯವಸ್ಥೆಯಲ್ಲಿ ಸೃಷ್ಟಿಸಿ ತನ್ನ ಶಕ್ತಿಯನ್ನು ತೋರಿಸಿದನು.
ದೇವರು ನಮಗೆ ಉಸಿರಾಡಲು ಅಗತ್ಯವಾದ ಗಾಳಿಯನ್ನು ನೀಡಿದ್ದಾನೆ. ಮಳೆ, ಸಮುದ್ರಗಳು, ನದಿಗಳು ಇವೆಲ್ಲವನ್ನೂ ನಮಗಾಗಿ ಸೃಷ್ಟಿಸಿದ್ದಾನೆ. ನಾವು ತಾಯಿಯ ಗರ್ಭದಲ್ಲಿರುವಾಗ ನಮಗೆ ಬಲವಿಲ್ಲದಿದ್ದರೂ ನಮ್ಮನ್ನು ಪೋಷಿಸಿದವನು ದೇವರು. ನಮ್ಮ ರಕ್ತನಾಳಗಳಲ್ಲಿ ರಕ್ತವನ್ನು ಹರಿಯುವಂತೆ ಮಾಡಿದವನು ಮತ್ತು ನಾವು ಜನಿಸಿದ ದಿನದಿಂದ ಸಾಯುವವರೆಗೂ ನಮ್ಮ ಹೃದಯವನ್ನು ಬಡಿಯುವಂತೆ ಮಾಡಿದವನು ದೇವರು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭದಿಂದ ಏನೂ ತಿಳಿಯದ ಸ್ಥಿತಿಯಲ್ಲಿ ಹೊರತಂದನು. ನಿಮಗೆ ಕೇಳುವ ಶಕ್ತಿ, ನೋಡುವ ಶಕ್ತಿ ಮತ್ತು ತಿಳಿಯುವ ಮನಸ್ಸನ್ನು ನೀಡಿದನು. ಇದರಿಂದ ನೀವು ಅವನಿಗೆ ಕೃತಜ್ಞತೆ ಸಲ್ಲಿಸಬಹುದು. (78: 16)
ಸರ್ವಶಕ್ತನಾದ ದೇವರು ಪರಿಪೂರ್ಣ ಗುಣಗಳ ಆಗರವಾಗಿದ್ದಾನೆ.
ನಮ್ಮ ಸೃಷ್ಟಿಕರ್ತನು ನಮಗೆ ಅವನ ಮಹತ್ವವನ್ನು ಗ್ರಹಿಸುವ ಮನಸ್ಸುಗಳನ್ನು ನೀಡಿದ್ದಾನೆ. ಮತ್ತು ಅವನ ಪರಿಪೂರ್ಣತೆಯನ್ನು ಸೂಚಿಸುವ ಸಹಜ ಪ್ರವೃತ್ತಿಯನ್ನು ನಮ್ಮಲ್ಲಿ ಬಿತ್ತಿದ್ದಾನೆ. ಅವನಲ್ಲಿ ಯಾವುದೇ ಕೊರತೆ ಇಲ್ಲ ಎಂಬುದು ಇದರ ಅರ್ಥ.
ಎಲ್ಲಾ ಆರಾಧನೆಯು ಅಲ್ಲಾಹನೊಬ್ಬನಿಗೆ ಮಾತ್ರ ಸಲ್ಲುತ್ತದೆ. ಅವನೊಬ್ಬನೇ ಪರಿಪೂರ್ಣ ಮತ್ತು ಆರಾಧನೆಗೆ ಅರ್ಹನಾದವನು. ಅವನೊಬ್ಬನನ್ನು ಬಿಟ್ಟು ಬೇರೆ ಯಾರಿಗಾದರೂ ಆರಾಧನೆ ಮಾಡುವುದು ನಿರರ್ಥಕ ಮತ್ತು ಅಪೂರ್ಣವಾಗಿದೆ. ಜೊತೆಗೆ, ಅವರು ಮರಣ ಮತ್ತು ನಾಶಕ್ಕೆ ಒಳಪಟ್ಟವರು.
ದೇವರನ್ನು ಮನುಷ್ಯ, ವಿಗ್ರಹ, ಮರ ಅಥವಾ ಪ್ರಾಣಿ ಎಂದು ಪರಿಗಣಿಸಲಾಗುವುದಿಲ್ಲ!
ಬುದ್ಧಿವಂತ ವ್ಯಕ್ತಿ ಪರಿಪೂರ್ಣನನ್ನಷ್ಟೇ ಆರಾಧಿಸಬೇಕು. ತನಗಿಂತ ಕೆಳಸ್ತರದ ಸೃಷ್ಟಿಯನ್ನು ಆರಾಧಿಸುವುದು ಹೇಗೆ ಸರಿ?
ದೇವರು ಒಬ್ಬ ಮಹಿಳೆಯ ಗರ್ಭದಲ್ಲಿ ಭ್ರೂಣವಾಗಿರಲು ಮತ್ತು ಶಿಶುವಿನಂತೆ ಜನಿಸಲು ಸಾಧ್ಯವಿಲ್ಲ!
"ದೇವರು ಎಲ್ಲವನ್ನೂ ಸೃಷ್ಟಿಸಿದನು, ಎಲ್ಲವೂ ಅವನ ಕೈಯಲ್ಲಿ ಮತ್ತು ಅವನ ಅಧಿಕಾರದಲ್ಲಿದೆ; ಮಾನವರು ಅವನಿಗೆ ಯಾವುದೇ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ ಮತ್ತು ಯಾರೂ ಅವನನ್ನು ಶಿಲುಬೆಗೇರಿಸಿ, ಯಾತನೆ ನೀಡಿ ಅಥವಾ ಅವಮಾನಿಸಲು ಸಾಧ್ಯವಿಲ್ಲ!"
ಕರ್ತನು ಎಂದಿಗೂ ಸಾಯುವುದಿಲ್ಲ!
ದೇವರು ಎಂದರೆ ಮರೆಯುವುದಿಲ್ಲ, ನಿದ್ರೆ ಮಾಡುವುದಿಲ್ಲ, ಆಹಾರ ಸೇವಿಸುವುದಿಲ್ಲ. ಅವನು ಅತ್ಯಂತ ಮಹಾನನು. ಅವನಿಗೆ ಹೆಂಡತಿ ಅಥವಾ ಮಕ್ಕಳು ಇರಲು ಸಾಧ್ಯವಿಲ್ಲ. ಸೃಷ್ಟಿಕರ್ತನು ಅತ್ಯಂತ ಮಹಾನ್ ಗುಣಗಳನ್ನು ಹೊಂದಿದ್ದಾನೆ. ಅವನು ಯಾವುದಕ್ಕೂ ಅವಲಂಬಿತನಾಗಿರುವುದಿಲ್ಲ ಅಥವಾ ಕೊರತೆಯನ್ನು ಅನುಭವಿಸುವುದಿಲ್ಲ. ದೇವರ ಮಹತ್ವಕ್ಕೆ ವಿರುದ್ಧವಾಗಿ ಪ್ರವಾದಿಗಳಿಗೆ ಆರೋಪಿಸಲಾದ ಎಲ್ಲಾ ಧರ್ಮಗ್ರಂಥಗಳು ಬದಲಾಯಿಸಲ್ಪಟ್ಟಿವೆ ಮತ್ತು ಮೂಸಾ, ಈಸಾ ಹಾಗೂ ಇತರ ಪ್ರವಾದಿಗಳಿಗೆ ಬಂದ ನಿಜವಾದ ದಿವ್ಯವಾಣಿಯಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಜನರೇ! ಒಂದು ಉದಾಹರಣೆಯನ್ನು ನೀಡಲಾಗುತ್ತದೆ. ಅದನ್ನು ಕಿವಿಗೊಟ್ಟು ಕೇಳಿರಿ. ಖಂಡಿತವಾಗಿಯೂ ನೀವು ಅಲ್ಲಾಹುವಿನ ಹೊರತು ಕರೆದು ಪ್ರಾರ್ಥಿಸುವವರು ಒಂದು ನೊಣವನ್ನೂ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನನ್ನಾದರೂ ಕಸಿದುಕೊಂಡು ಹೋದರೆ ಅದರಿಂದ ಅದನ್ನು ಮರಳಿಪಡೆಯಲು ಅವರಿಗೆ ಸಾಧ್ಯವಾಗದು. ಪ್ರಾರ್ಥಿಸುವವನೂ ಪ್ರಾರ್ಥಿಸಲ್ಪಡುವವನೂ ಬಲಹೀನರಾಗಿರುವರು!(73) ಅಲ್ಲಾಹುವನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಅವರು ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.(74) .[74 ,73 :22]
ಸೃಷ್ಟಿಕರ್ತನು ನಮ್ಮನ್ನು ಯಾವುದೇ ಮಾರ್ಗದರ್ಶನವಿಲ್ಲದೇ ಬಿಡುತ್ತಾನೆಯೇ?
ಅಲ್ಲಾಹನು ಈ ಎಲ್ಲಾ ಸೃಷ್ಟಿಗಳನ್ನು ಉದ್ದೇಶರಹಿತ ಸೃಷ್ಟಿಸಿದ್ದಾನೆಂದು ಅರ್ಥವಾಗಬಹುದೇ? ಅವನು ಯುಕ್ತಿಪೂರ್ಣನು, ಎಲ್ಲವನ್ನು ಅರಿಯುವವನಾಗಿರುವಾಗ ಅವನು ಅವರನ್ನು ವ್ಯರ್ಥವಾಗಿ ಸೃಷ್ಟಿಸಿದ್ದಾನೆಯೇ?
ನಾವು ಇಷ್ಟು ಸೂಕ್ಷ್ಮವಾಗಿ ಮತ್ತು ಪರಿಪೂರ್ಣವಾಗಿ ಸೃಷ್ಟಿಸಲ್ಪಟ್ಟಿದ್ದೇವೆ, ಆಕಾಶ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ನಮಗೆ ವಿಧೇಯರನ್ನಾಗಿಸಿದವನು ನಮ್ಮನ್ನು ಉದ್ದೇಶರಹಿತ ಸೃಷ್ಟಿಸಲು ಸಾಧ್ಯವೇ? ಅಥವಾ ನಾವು ಎಲ್ಲಿಂದ ಬಂದೆವು, ಸಾವಿನ ನಂತರ ಏನಾಗುತ್ತದೆ ಮತ್ತು ನಮ್ಮನ್ನು ಏಕೆ ಸೃಷ್ಟಿಸಲಾಯಿತು ಎಂಬಂತಹ ನಮ್ಮನ್ನು ಕಾಡುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡದೆ ನಮ್ಮನ್ನು ಬಿಟ್ಟನೋ ಎಂದು ಯೋಚಿಸುವುದು ಸಮಂಜಸವೇ?
ಖಚಿತವಾಗಿ ನಮ್ಮ ಸೃಷ್ಟಿಯ ಮೂಲ ಉದ್ದೇಶವೇನು? ಮತ್ತು ಅವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ ಎಂದು ತಿಳಿಯಲು ದೇವರು ಪ್ರವಾದಿಗಳನ್ನು ನಿಯೋಗಿಸಿದನು.
ಆದ್ದರಿಂದ ,ಅವನೊಬ್ಬನೇ ಆರಾಧನೆಗೆ ಅರ್ಹನೆಂದು ತಿಳಿಸಲು , ಅವನನ್ನು ಹೇಗೆ ಆರಾಧಿಸಬೇಕೆಂದು ಕಲಿಸಲು, ಅವನ ಆಜ್ಞೆಗಳನ್ನು ಮತ್ತು ನಿಷೇಧಗಳನ್ನು ತಲುಪಿಸಲು, ಮತ್ತು ನಾವು ಅನುಸರಿಸಿದರೆ ನಮ್ಮ ಜೀವನವನ್ನು ಒಳ್ಳೆಯದಾಗಿ ಮಾಡುವ ಉತ್ತಮ ಗುಣಗಳನ್ನು ವ್ಯಕ್ತಪಡಿಸಲು ಅಲ್ಲಾಹು ಪ್ರವಾದಿಗಳನ್ನು ಕಳುಹಿಸಿದನು.
ಅಲ್ಲಾಹು ನೂಹ್, ಇಬ್ರಾಹಿಂ, ಮೂಸಾ, ಈಸಾ ಹಾಗೂ ಇತರ ಅನೇಕ ಪ್ರವಾದಿಗಳನ್ನು ತಮ್ಮ ಸತ್ಯತೆಯನ್ನು ಸಾಬೀತುಪಡಿಸುವಂತಹ ಅದ್ಭುತ ಶಕ್ತಿಗಳನ್ನು ಮತ್ತು ಕುರುಹುಗಳನ್ನು ನೀಡಿ ಕಳುಹಿಸಿದನು. ಅವರು ಸೃಷ್ಟಿಕರ್ತನಿಂದಲೇ ಕಳುಹಿಸಲ್ಪಟ್ಟವರು ಎಂಬುದಕ್ಕೆ ಇವು ಸಾಕ್ಷಿಯಾಗಿವೆ.
ಅಂತಿಮ ಸಂದೇಶವಾಹಕರು ಮುಹಮ್ಮದ್ ﷺ ಅಲ್ಲಾಹು ಅವರ ಮೇಲೆ ಪವಿತ್ರ ಕುರ್ ಆನ್ ನನ್ನು ಅವತೀರ್ಣ ಗೊಳಿಸಿದನು.
ಈ ಐಹಿಕ ಜೀವನವು ಒಂದು ಪರೀಕ್ಷೆಯಾಗಿದೆ ಮತ್ತು ನಿಜವಾದ ಜೀವನವು ಮರಣಾನಂತರ ಪ್ರಾರಂಭವಾಗುತ್ತದೆಯೆಂದು ಸಂದೇಶವಾಹಕರು ನಮಗೆ ಸ್ಪಷ್ಟವಾಗಿ ತಿಳಿಸಿದ್ದಾರೆ
ಯಾವುದೇ ಸಹಭಾಗಿತ್ವವಿಲ್ಲದೆ ಅಲ್ಲಾಹನನ್ನು ಮಾತ್ರ ಆರಾಧಿಸುವ ಮತ್ತು ಎಲ್ಲಾ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವ ಸತ್ಯ ವಿಶ್ವಾಸಿಗಳಿಗೆ ಅಲ್ಲಿ ಸ್ವರ್ಗವಿದೆ, ಅದೇ ರೀತಿ ಅಲ್ಲಾಹನೊಂದಿಗೆ ಇತರೆ ಮಿಥ್ಯ ಆರಾಧ್ಯರುಗಳನ್ನು ಆರಾಧಿಸಿ ಯಾವುದೇ ಸಂದೇಶವಾಹಕರನ್ನು ನಿಷೇಧಿಸಿದ ಸತ್ಯನಿಷೇಧಿಗಳಿಗೆ ಅಲ್ಲಿ ನರಕವಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ಓ ಆದಮಿನ ಸಂತತಿಗಳೇ! ನಿಮಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ನಿಮ್ಮ ಬಳಿಗೆ ಸಂದೇಶವಾಹಕರು ಬರುವಾಗ ಭಯಭಕ್ತಿ ಪಾಲಿಸುವವರು ಮತ್ತು ನಿಲುವನ್ನು ಸುಧಾರಿಸುವವರು ಯಾರೋ ಅವರು ಯಾವುದನ್ನೂ ಭಯಪಡಬೇಕಾಗಿಲ್ಲ. ಅವರು ದುಃಖಿಸಬೇಕಾಗಿಯೂ ಬರಲಾರದು(35) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರು ಮತ್ತು ಅವುಗಳಿಗೆದುರಾಗಿ ಅಹಂಕಾರಪಡುವವರು ಯಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. .[35,36 :7]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: "ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆ ಮತ್ತು ನಮ್ಮ ಬಳಿಗೆ ನಿಮ್ಮನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ನೀವು ಭಾವಿಸುತ್ತೀರಾ?" .[115 :23]
ಪವಿತ್ರ ಕುರ್ಆನ್
ಕುರ್ ಆನ್ ಎಂಬುದು ಅಲ್ಲಾಹನ ವಾಕ್ಯವಾಗಿದ್ದು, ಅಲ್ಲಾಹನು ಅಂತಿಮ ಪ್ರವಾದಿ ಮುಹಮ್ಮದ್ ﷺ ರಿಗೆ ಅವತೀರ್ಣಗೊಳಿಸಿದನು. ಇದು ಪ್ರವಾದಿ ಮುಹಮ್ಮದ್ ﷺರ ಪ್ರವಾದಿತ್ವದ ಸತ್ಯವನ್ನು ಸಾಬೀತುಪಡಿಸುವ ಅತಿ ದೊಡ್ಡ ಪವಾಡವಾಗಿದೆ. ಇದರ ಆಜ್ಞೆಗಳು ಸತ್ಯವಾಗಿದ್ದು, ವಾರ್ತೆಗಳು ನಿಜವಾಗಿರುತ್ತವೆ. ಅಲ್ಲಾಹನು ಈ ಕುರ್ ಆನ್ ನಂತಹ ಒಂದು ಸೂರಾವನ್ನು ತರಲು ಸವಾಲು ಹಾಕಿದನು ಆದರೆ ಅವರಿಂದ ಅದನ್ನು ಮಾಡಲು ಸಾಧ್ಯವಾಗಲಿಲ್ಲ, ಏಕೆಂದರೆ ಇದರ ಶೈಲಿ ಬಹಳ ಸುಂದರವಾಗಿದ್ದು, ಅದರ ಪದಗಳ ಬಳಕೆ ಬಹಳ ಕೌಶಲ್ಯಪೂರ್ಣವಾಗಿದೆ. ಈ ಗ್ರಂಥವು ಮಾನವನಿಂದ ಬಂದಿರಲು ಸಾಧ್ಯವಿಲ್ಲ ಎಂಬುದನ್ನು ತೋರಿಸುವ ಅನೇಕ ತಾರ್ಕಿಕ ಸಾಕ್ಷಿಗಳು ಮತ್ತು ವೈಜ್ಞಾನಿಕ ಸತ್ಯಗಳನ್ನು ಒಳಗೊಂಡಿದೆ ಬದಲಾಗಿ ಇದು ಮಾನವರ ರಬ್ಬಿನ ವಾಕ್ಯವಾಗಿದೆ.
ಇಷ್ಟೊಂದು ಸಂದೇಶವಾಹಕರು ಏಕೆ ಬಂದರು?
"ಅಲ್ಲಾಹು ಆದಿಯಿಂದಲೂ ತನ್ನ ದೂತರನ್ನು (ಪ್ರವಾದಿಗಳನ್ನು) ಕಳುಹಿಸುತ್ತಾ ಬಂದಿದ್ದಾನೆ. ಅವರು ಜನರನ್ನು ತಮ್ಮ ಒಡೆಯನ ಆರಾಧನೆಯೆಡೆಗೆ ಕರೆದರು ಹಾಗೂ ಅವನ ವಿಧಿ-ನಿಷೇಧಗಳನ್ನು ತಿಳಿಸಿದರು. ಅವರೆಲ್ಲರ ಕರೆಯೂ ಒಂದೇ ಆಗಿತ್ತು; ಅದೇನೆಂದರೆ, 'ಏಕೈಕ ಅಲ್ಲಾಹನನ್ನು ಮಾತ್ರ ಆರಾಧಿಸುವುದು'. ಯಾವುದಾದರೂ ಒಂದು ಸಮುದಾಯವು ಪ್ರವಾದಿಯ ಸಂದೇಶವನ್ನು ತಿರಸ್ಕರಿಸಿದಾಗ ಅಥವಾ ತಿರುಚಿದಾಗ, ಅಲ್ಲಾಹು ಮತ್ತೊಬ್ಬ ಪ್ರವಾದಿಯನ್ನು ಕಳುಹಿಸುತ್ತಿದ್ದನು. ಆ ಹೊಸ ಪ್ರವಾದಿಯು ದಾರಿಯನ್ನು ಸರಿಪಡಿಸಿ, ಜನರನ್ನು ಮತ್ತೆ ಏಕದೇವಾರಾಧನೆಯತ್ತ ಕರೆತರುತ್ತಿದ್ದರು.ಅಂತಿಮವಾಗಿ, ಅಲ್ಲಾಹು ಮುಹಮ್ಮದ್ (ಸ) ಅವರನ್ನು ಕೊನೆಯ ಪ್ರವಾದಿಯನ್ನಾಗಿ ಕಳುಹಿಸಿದನು. ಅವರು ಸಮಸ್ತ ಮಾನವಕುಲಕ್ಕಾಗಿ ಶಾಶ್ವತವಾದ ಧರ್ಮವನ್ನು ತಂದರು. ಈ ಧರ್ಮವು ಲೋಕಾಂತ್ಯದವರೆಗೂ ಎಲ್ಲರಿಗೂ ಅನ್ವಯಿಸುತ್ತದೆ. ಇದು ಹಿಂದಿನ ಎಲ್ಲಾ ಧರ್ಮಗಳನ್ನು ಪೂರ್ಣಗೊಳಿಸಿ, ಅವುಗಳನ್ನು ರದ್ದುಪಡಿಸಿತು. ಈ ಧರ್ಮ ಮತ್ತು ಪ್ರವಾದಿಯ ಸಂದೇಶವು ಅಂತ್ಯಕಾಲದವರೆಗೂ ಸುರಕ್ಷಿತವಾಗಿರುವಂತೆ ಅಲ್ಲಾಹು ಖಾತರಿಪಡಿಸಿದ್ದಾನೆ."
ಆದ್ದರಿಂದ ನಾವು ಮುಸ್ಲಿಮರು ಅಲ್ಲಾಹನ ಆಜ್ಞೆಯಂತೆ ಎಲ್ಲಾ ಸಂದೇಶವಾಹಕರು ಮತ್ತು ಪೂರ್ವಗ್ರಂಥಗಳಲ್ಲಿ ವಿಶ್ವಾಸವಿಡುತ್ತೇವೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: {ಸಂದೇಶ ವಾಹಕರು ತನ್ನ ಪ್ರಭುವಿನ ವತಿಯಿಂದ ಅವತೀರ್ಣಗೊಂಡುದರ ಮೇಲೆ ವಿಶ್ವಾಸವಿರಿಸಿದ್ದಾರೆ ಮತ್ತು ಈ ಸಂದೇಶವಾಹಕರ ಮೇಲೆ ವಿಶ್ವಾಸ ವಿಡುವವರೂ ಸಹ ಈ ಭೋದನೆಯನ್ನು ಹೃತ್ಪೂರ್ವಕ ಸ್ವೀಕರಿಸಿದ್ದಾರೆ. ಇವರೆಲ್ಲರೂ ಅಲ್ಲಾಹನಲ್ಲಿಯೂ ಅವನ ದೇವಚರರಲ್ಲಿಯೂ ಅವನ ದಿವ್ಯಗ್ರಂಥಗಳಲ್ಲಿಯೂ ಅವನ ಸಂದೇಶವಾಹಕರಲ್ಲಿಯೂ ವಿಶ್ವಾಸ ವಿರಿಸುತ್ತಾರೆ. "ನಾವು ಅಲ್ಲಾಹನ ಸಂದೇಶವಾಹಕರ ನಡುವೆ ಯಾವತ್ತೂ ತಾರತಮ್ಯವನ್ನಿರಿಸುವುದಿಲ್ಲ. ನಾವು ಆಜ್ಞೆಯನ್ನು ಆಲಿಸಿದೆವು ಮತ್ತು ಅನುಸರಣೆಯನ್ನು ಸ್ವೀಕರಿಸಿದೆವು. ನಮ್ಮ ಪ್ರಭು, ನಾವು ನಿನ್ನಿಂದ ಪಾಪ ವಿಮೋಚನೆಯನ್ನು ಬಯಸುತ್ತೇವೆ ಮತ್ತು ನಮಗೆ ನಿನ್ನ ಕಡೆಗೆ ಮರಳಿಕ್ಕಿದೆ" ಎಂದು ಅವರೆನ್ನುತ್ತಾರೆ.} .[285 :2]
ಎಲ್ಲಾ ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವವರೆಗೆ ಒಬ್ಬ ವ್ಯಕ್ತಿ ಸತ್ಯವಿಶ್ವಾಸಿಯಾಗಲಾರ.
ಅಲ್ಲಾಹನೇ ಪ್ರವಾದಿಗಳನ್ನು ಕಳುಹಿಸಿದ್ದಾನೆ. ಅವರಲ್ಲಿ ಒಬ್ಬ ಸಂದೇಶವಾಹಕರ ಪ್ರವಾದಿತ್ವವನ್ನು ನಿರಾಕರಿಸಿದವನು ಎಲ್ಲಾ ಪ್ರವಾದಿಗಳ ಸಂದೇಶವನ್ನು ನಿರಾಕರಿಸಿದಂತೆ. ಅಲ್ಲಾಹನ ಸಂದೇಶವನ್ನು ನಿರಾಕರಿಸುವುದಕ್ಕಿಂತ ದೊಡ್ಡ ಪಾಪವಿಲ್ಲ. ಸ್ವರ್ಗಕ್ಕೆ ಪ್ರವೇಶಿಸಲು ಎಲ್ಲಾ ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ.
ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಅಲ್ಲಾಹನ ಎಲ್ಲಾ ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ ಕೊನೆಯ ಮತ್ತು ಅಂತಿಮ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರಲ್ಲಿ ವಿಶ್ವಾಸವಿರಿಸಿ ಅವರನ್ನು ಅನುಸರಿಸುವುದರಿಂದ ಮಾತ್ರ ಅದು ಸಾಧ್ಯವಾಗುತ್ತದೆ.
"ಅಲ್ಲಾಹನ ಪ್ರವಾದಿಗಳ ಪೈಕಿ ಯಾರಾದರೂ ಓರ್ವ ಪ್ರವಾದಿಯ ಮೇಲೆ ವಿಶ್ವಾಸವಿರಿಸುವುದನ್ನು ನಿರಾಕರಿಸಿದರೆ ಅವನು ಅಲ್ಲಾಹು ಮತ್ತು ಅವನ ವಹ್ಯ್ (ದಿವ್ಯ ವಾಣಿ)ಅನ್ನು ನಿರಾಕರಿಸಿದಂತೆ ಎಂದು ಪವಿತ್ರ ಕುರ್ ಆನಿನಲ್ಲಿ ಅಲ್ಲಾಹು ಹೇಳಿದ್ದಾನೆ ."
ಕೆಳಗಿನ ಸೂಕ್ತಿ ಓದಿ: “ನಿಶ್ಚಯವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರುಗಳನ್ನು ನಿಷೇಧಿಸುವವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರುಗಳ ಮಧ್ಯೆ ವ್ಯತ್ಯಾಸ ಮಾಡಲು ಬಯಸುವವರು, ನಾವು ಕೆಲವರನ್ನು ನಂಬುತ್ತೇವೆ ಮತ್ತು ನಾವು ಕೆಲವರನ್ನು ನಂಬುವುದಿಲ್ಲ ಎಂದು ಹೇಳುವವರು ಮತ್ತು ಅದರ ಮಧ್ಯೆ ಒಂದು ಮಾರ್ಗವನ್ನು ಸ್ವೀಕರಿಸಲು ಬಯಸುವವರು. ಅವರೇ ನಿಜವಾದ ಸತ್ಯನಿಷೇಧಿಗಳು. ಮತ್ತು ನಾವು ಸತ್ಯನಿಷೇಧಿಗಳಿಗೆ ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. .[150, 151 :4]
ಇಸ್ಲಾಂ ಎಂದರೇನು?
ಇಸ್ಲಾಂ ಎಂದರೆ ಅಲ್ಲಾಹನೇ ಏಕೈಕ ದೇವರು ಎಂದು ಒಪ್ಪಿಕೊಂಡು, ಅವನ ಆಜ್ಞೆಗಳನ್ನು ಪಾಲಿಸುವುದು ಮತ್ತು ಅವನ ಧರ್ಮಶಾಸನವನ್ನು (ಶರಿಯತ್) ಸಂತೋಷದಿಂದ ಸ್ವೀಕರಿಸುವುದು.**
ಅಲ್ಲಾಹನು ತನ್ನ ಪ್ರವಾದಿಗಳನ್ನು ಕಳುಹಿಸಿದ್ದು ಒಂದೇ ಸಂದೇಶವನ್ನು ಸಾರಲು: ಅವನೊಬ್ಬನನ್ನೇ ಆರಾಧಿಸಿರಿ ಮತ್ತು ಅವನಿಗೆ ಯಾರೂ ಸಮಾನರಿಲ್ಲವೆಂದು ಜನರಿಗೆ ತಿಳಿಸಲು.
ಎಲ್ಲಾ ಪ್ರವಾದಿಗಳ ಧರ್ಮವೂ ಇಸ್ಲಾಂ ಆಗಿದೆ. ಅವರ ಮೂಲ ಸಂದೇಶ ಒಂದೇ ಆಗಿದ್ದರೂ, ಅವರಿಗೆ ನೀಡಲ್ಪಟ್ಟ ಧರ್ಮಶಾಸನಗಳು ಬೇರೆ ಬೇರೆಯಾಗಿದ್ದವು. ಇಂದು, ಎಲ್ಲಾ ಪ್ರವಾದಿಗಳು ಬೋಧಿಸಿದ ಆ ಸತ್ಯ ಧರ್ಮವನ್ನು ಮುಸ್ಲಿಮರು ಮಾತ್ರ ಅನುಸರಿಸುತ್ತಿದ್ದಾರೆ. ಈ ಯುಗದಲ್ಲಿ ಇಸ್ಲಾಂ ಮಾತ್ರವೇ ಸತ್ಯಧರ್ಮವಾಗಿದೆ. ಇಬ್ರಾಹಿಂ, ಮೂಸಾ ಮತ್ತು ಈಸಾ ಅವರನ್ನು ಕಳುಹಿಸಿದ ಅಲ್ಲಾಹನೇ, ತನ್ನ ಅಂತಿಮ ಪ್ರವಾದಿಯಾದ ಮುಹಮ್ಮದ್ ಅವರನ್ನೂ ಕಳುಹಿಸಿದ್ದಾನೆ. ಹೀಗಾಗಿ, ಇಸ್ಲಾಮಿನ ಧರ್ಮಶಾಸನವು ಹಿಂದಿನ ಎಲ್ಲಾ ದೈವಿಕ ಶಾಸನಗಳನ್ನು ರದ್ದುಗೊಳಿಸಿದೆ.
ಇಸ್ಲಾಂ ಹೊರತುಪಡಿಸಿ, ಇಂದು ಜನರು ಅನುಸರಿಸುತ್ತಿರುವ ಇತರ ಧರ್ಮಗಳು ಒಂದೋ ಮಾನವ ನಿರ್ಮಿತವಾಗಿವೆ, ಅಥವಾ ಮೂಲದಲ್ಲಿ ದೈವಿಕವಾಗಿದ್ದರೂ ಕಾಲಾನಂತರದಲ್ಲಿ ಮಾನವರಿಂದ ಬದಲಾವಣೆಗೊಂಡು ಇಂದು ಕಟ್ಟುಕಥೆಗಳು, ಪುರಾಣಗಳು ಮತ್ತು ಮನುಷ್ಯರ ಕಲ್ಪನೆಗಳ ಮಿಶ್ರಣವಾಗಿವೆ. ಆದರೆ, ಮುಸ್ಲಿಮರ ನಂಬಿಕೆಯು ಏಕರೂಪ, ಸ್ಪಷ್ಟ ಹಾಗೂ ಸ್ಥಿರವಾಗಿದೆ. ಉದಾಹರಣೆಗೆ, ಕುರ್ಆನ್ ಅನ್ನು ಗಮನಿಸಿ; ಇದು ಜಗತ್ತಿನಾದ್ಯಂತ ಎಲ್ಲಾ ಮುಸ್ಲಿಮರ ಬಳಿಯೂ ಒಂದೇ ರೂಪದಲ್ಲಿರುವ ಗ್ರಂಥವಾಗಿದೆ.
ಸರ್ವಶಕ್ತ ಅಲ್ಲಾಹು ಕುರಾನ್ನಲ್ಲಿ ಹೇಳಿದ್ದಾನೆ:
“(ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹನಲ್ಲಿ, ನಮಗೆ ಅವತೀರ್ಣಗೊಂಡಿರುವುದರಲ್ಲಿ (ಕುರ್ಆನ್ನಲ್ಲಿ), ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅ್ಕೂಬ್ ಮತ್ತು ಯಅ್ಕೂಬ್ ಸಂತತಿಗಳಿಗೆ ಅವತೀರ್ಣಗೊಂಡಿರುವುದರಲ್ಲಿ, ಮೂಸಾ, ಈಸಾ ಹಾಗೂ ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ವ್ಯತ್ಯಾಸ ಕಲ್ಪಿಸಲಾರೆವು. ನಾವು ಅಲ್ಲಾಹನಿಗೆ ಶರಣಾದವರಾಗಿರುವೆವು.(84) “ಯಾರಾದರೂ ಇಸ್ಲಾಮಿಗೆ (ಅಲ್ಲಾಹನಿಗಿರುವ ಶರಣಾಗತಿಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.”85 [3: 84,85].
" ಯೇಸು ಕ್ರಿಸ್ತರ ಬಗ್ಗೆ ಮುಸ್ಲಿಮರು ಏನು ವಿಶ್ವಾಸವಿರಿಸುತ್ತಾರೆ?"
ಮುಸ್ಲಿಮರು ಅಲ್ಲಾಹನ ಪ್ರವಾದಿ ಈಸಾರ ಮೇಲೆ ವಿಶ್ವಾಸವಿರಿಸುವುದು, ಅವರನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಅವರ ಸಂದೇಶವನ್ನು ನಂಬುವುದು ಕಡ್ಡಾಯವಾಗಿದೆ ಎಂದು ನಿಮಗೆ ತಿಳಿದಿದೆಯೇ? ಅಲ್ಲಾಹನೊಬ್ಬನನ್ನು ಮಾತ್ರ ಆರಾಧಿಸುವಂತೆ ಕರೆ ನೀಡುವುದು ಅವರ ಸಂದೇಶ. ಮುಸ್ಲಿಮರು ಈಸಾ ಮತ್ತು ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಇವರಿಬ್ಬರೂ ಸಂದೇಶವಾಹಕರು ಮಾನವರನ್ನು ಅಲ್ಲಾಹನ ಮಾರ್ಗ ಮತ್ತು ಸ್ವರ್ಗದ ಮಾರ್ಗದರ್ಶನ ಮಾಡಲು ಕಳುಹಿಸಲ್ಪಟ್ಟವರೆಂದು ವಿಶ್ವಾಸವಿರಿಸುತ್ತಾರೆ.
ಈಸಾ (ಅಲೈಹಿಸ್ಸಲಾಂ) ಅವರನ್ನು, ಅಲ್ಲಾಹನು ಕಳುಹಿಸಿದ ಮಹಾನ್ ರಸೂಲರಲ್ಲಿ ಒಬ್ಬರೆಂದು ನಾವು ನಂಬುತ್ತೇವೆ. ಅವರು ಪವಾಡಸದೃಶವಾಗಿ ಜನಿಸಿದರು ಎಂದೂ ನಾವು ನಂಬುತ್ತೇವೆ. ಕುರ್ಆನ್ನಲ್ಲಿ ಅಲ್ಲಾಹನು ತಿಳಿಸಿರುವ ಪ್ರಕಾರ, ಆತನು ಆದಮ್ (ಅಲೈಹಿಸ್ಸಲಾಂ) ಅವರನ್ನು ತಂದೆ-ತಾಯಿಯಿಲ್ಲದೆ ಸೃಷ್ಟಿಸಿದಂತೆಯೇ, ಈಸಾ (ಅಲೈಹಿಸ್ಸಲಾಂ) ಅವರನ್ನೂ ತಂದೆಯಿಲ್ಲದೆ ಸೃಷ್ಟಿಸಿದನು. ಅಲ್ಲಾಹನು ಸರ್ವಶಕ್ತನಾಗಿದ್ದಾನೆ.
ಈಸಾ ದೇವರಲ್ಲ, ಹಾಗೂ ಅಲ್ಲಾಹನ ಮಗನೂ ಅಲ್ಲ ಮತ್ತು ಅವರನ್ನು ಶಿಲುಬೆಗೇರಿಸಲಾಗಿಲ್ಲಾ, ಬದಲಾಗಿ ಅವರು ಜೀವಂತರಾಗಿದ್ದಾರೆಂದು ನಾವು ನಂಬುತ್ತೇವೆ.ಅಂತಿಮ ಕಾಲದಲ್ಲಿ ಅವರನ್ನು ನ್ಯಾಯಯುತ ಆಡಳಿತಗಾರರನ್ನಾಗಿ ಕಳುಹಿಸಲು ಅಲ್ಲಾಹು ಅವರನ್ನು ತನ್ನೆಡೆಗೆ ಎತ್ತಿ ಕೊಂಡನು.ಆ ಸಮಯದಲ್ಲಿ ಅವರು ಮುಸ್ಲಿಮರೊಂದಿಗೆ ಇರುತ್ತಾನೆ, ಏಕೆಂದರೆ ಈಸಾ ಮತ್ತು ಎಲ್ಲಾ ಪ್ರವಾದಿ ಗಳೊಡನೆ ಕಳುಹಿಸಲಾದ ಏಕ ದೇವತ್ವವನ್ನು ನಂಬುವವರು ಮುಸ್ಲಿಮರು ಮಾತ್ರ ಆಗಿದ್ದಾರೆ.
ಕುರ್ಆನ್ನಲ್ಲಿ ಅಲ್ಲಾಹನು ತಿಳಿಸಿರುವ ಪ್ರಕಾರ, ಕ್ರೈಸ್ತರು ಯೇಸುವಿನ ಮೂಲ ಸಂದೇಶವನ್ನು ಬದಲಾಯಿಸಿದ್ದಾರೆ. ದಾರಿ ತಪ್ಪಿದ ಕೆಲವರು ಸುವಾರ್ತೆಯನ್ನು ಮಾರ್ಪಡಿಸಿ, ಈಸಾ ಹೇಳಿರದ ವಿಷಯಗಳನ್ನು ಅದರಲ್ಲಿ ಸೇರಿಸಿದರು. ಇಂದು ಸುವಾರ್ತೆಯ ಹಲವು ಆವೃತ್ತಿಗಳು ಇರುವುದೂ ಮತ್ತು ಅವುಗಳಲ್ಲಿ ಅನೇಕ ವೈರುಧ್ಯಗಳು ಕಂಡುಬರುವುದೂ ಇದಕ್ಕೆ ಸಾಕ್ಷಿಯಾಗಿದೆ.
ಈಸಾ ತಮ್ಮ ಸೃಷ್ಟಿಕರ್ತನಾದ ದೇವರನ್ನೇ ಆರಾಧಿಸುತ್ತಿದ್ದರೆಂದು ಕುರ್ಆನ್ನಲ್ಲಿ ಅಲ್ಲಾಹು ನಮಗೆ ತಿಳಿಸಿದ್ದಾನೆ. ಅವರು ತಮ್ಮನ್ನು ಆರಾಧಿಸುವಂತೆ ಯಾರಿಗೂ ಹೇಳಲಿಲ್ಲ, ಬದಲಾಗಿ ತಮ್ಮ ಜನರಿಗೆ ಆ ಏಕೈಕ ಸೃಷ್ಟಿಕರ್ತನನ್ನೇ ಆರಾಧಿಸಲು ಆಜ್ಞಾಪಿಸಿದ್ದರು. ಆದರೆ, ಶೈತಾನನು ಕ್ರೈಸ್ತರನ್ನು ದಾರಿ ತಪ್ಪಿಸಿ ಯೇಸುವನ್ನೇ ಆರಾಧಿಸುವಂತೆ ಮಾಡಿದನು. ಅಲ್ಲಾಹು ಕುರ್ಆನ್ನಲ್ಲಿ, ತನ್ನನ್ನು ಹೊರತುಪಡಿಸಿ ಬೇರೆಯರನ್ನು ಆರಾಧಿಸುವವರನ್ನು ಕ್ಷಮಿಸುವುದಿಲ್ಲವೆಂದು ಹೇಳಿದ್ದಾನೆ.ಪುನರುತ್ಥಾನದ ದಿನದಂದು, ಯೇಸು ತಮ್ಮನ್ನು ಆರಾಧಿಸಿದವರನ್ನು ನಿರಾಕರಿಸುತ್ತಾರೆ ಮತ್ತು "ನಾನು ನಿಮಗೆ ನನ್ನ ಸೃಷ್ಟಿಕರ್ತನನ್ನು ಆರಾಧಿಸಲು ಆಜ್ಞಾಪಿಸಿದ್ದೇನೇ ಹೊರತು, ನನ್ನನ್ನು ಆರಾಧಿಸಲು ಎಂದಿಗೂ ಹೇಳಿರಲಿಲ್ಲ" ಎಂದು ಹೇಳುವರು. ಇದಕ್ಕೆ ಸರ್ವಶಕ್ತನಾದ ಅಲ್ಲಾಹನ ಮಾತೇ ಸಾಕ್ಷಿಯಾಗಿದೆ.
ಮರಿಯಮ್ಮಳ ಮಗನಾದ ಯೇಸು (ಈಸಾ), ಅಲ್ಲಾಹನ ಸಂದೇಶವಾಹಕ, ಆತನು ಮರಿಯಮ್ಮಳಿಗೆ ಕರುಣಿಸಿದ ತನ್ನ 'ವಚನ' ಮತ್ತು ತನ್ನ ಕಡೆಯಿಂದ ಬಂದ 'ಆತ್ಮ' ಆಗಿದ್ದಾರೆ. ಆದ್ದರಿಂದ, ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ನಂಬಿಕೆಯಿಡಿ. ಅವನಿಗೆ ಮಗನಿದ್ದಾನೆ ಎನ್ನುವುದರಿಂದ ಆತನು ಪರಮಪಾವನನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಆತನಿಗೇ ಸೇರಿದೆ ಮತ್ತು ಕಾರ್ಯನಿರ್ವಾಹಕನಾಗಿ ಅಲ್ಲಾಹನೇ ಸಾಕಾಗಿದ್ದಾನೆ. [4 : 171].
"ಅಲ್ಲಾಹು ಹೇಳಿದನು: (ಅಲ್ಲಾಹನು, "ಓ ಮರ್ಯಮರ ಪುತ್ರ ಈಸಾ, ನೀವು ಜನರಿಗೆ, 'ಅಲ್ಲಾಹನ ಹೊರತು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರನ್ನಾಗಿ ಮಾಡಿಕೊಳ್ಳಿರೆಂದು ಜನರೊಡನೆ ಹೇಳಿದ್ದೀರಾ?" ಎಂದು ಕೇಳುವಾಗ ಅವರು ಉತ್ತರಿಸುವರು: ನೀನು ಪರಮ ಪಾವನನು ನನಗೆ ಹೇಳಲು ಹಕ್ಕಿಲ್ಲದಂತಹ ಮಾತನ್ನು ಹೇಳುವ ಕಾರ್ಯ ನನ್ನದಾಗಿರಲಿಲ್ಲ. ನಾನು ಹಾಗೆ ಹೇಳಿರುತ್ತಿದ್ದರೆ ಅದು ಖಂಡಿತವಾಗಿಯೂ ನಿನಗೆ ತಿಳಿದಿರುತ್ತಿತ್ತು. ನನ್ನ ಮನಸ್ಸಿನಲ್ಲಿರುವುದು ನಿನಗೆ ಗೊತ್ತಿದೆ. ನಿನ್ನ ಮನಸ್ಸಿನಲ್ಲಿರುವುದು ನನಗೆ ಗೊತ್ತಿಲ್ಲ, ನೀನು ಸಕಲ ರಹಸ್ಯ ಪರಮಾರ್ಥಗಳ ಜ್ಞಾನಿಯಾಗಿರುತ್ತಿ. (5 :116)
ಸ್ವರ್ಗವನ್ನು ಪಡೆಯಲು ಬಯಸುವವರು ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು ಮತ್ತು ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರನ್ನು ಅನುಸರಿಸಬೇಕು.
ಎಲ್ಲಾ ಪ್ರವಾದಿಗಳು ಸಾರಿದ ಸತ್ಯವೇನೆಂದರೆ, ಅಲ್ಲಾಹನಲ್ಲಿ ನಂಬಿಕೆಯಿಟ್ಟು, ಅವನಿಗೆ ಯಾರನ್ನೂ ಸರಿಸಾಟಿಯಾಗಿಸದೆ ಮತ್ತು ಎಲ್ಲಾ ಪ್ರವಾದಿಗಳನ್ನು ನಂಬುವ ಮುಸ್ಲಿಮರು ಮಾತ್ರ ಪರಲೋಕದಲ್ಲಿ ರಕ್ಷಣೆ ಪಡೆಯುತ್ತಾರೆ. ಉದಾಹರಣೆಗೆ, ಮೂಸಾ (ಅಲೈಹಿಸ್ಸಲಾಂ) ಅವರ ಕಾಲದಲ್ಲಿ, ಅವರನ್ನು ನಂಬಿದವರೇ ಅಂದಿನ ಸತ್ಯನಿಷ್ಠ ಮುಸ್ಲಿಮರಾಗಿದ್ದರು. ಆದರೆ, ಅಲ್ಲಾಹನು ಈಸಾ (ಅಲೈಹಿಸ್ಸಲಾಂ) ಅವರನ್ನು ಪ್ರವಾದಿಯಾಗಿ ಕಳುಹಿಸಿದಾಗ, ಮೂಸಾ ಅವರ ಅನುಯಾಯಿಗಳು ಈಸಾ ಅವರನ್ನೂ ನಂಬಬೇಕಾಗಿತ್ತು. ಹಾಗೆ ಈಸಾ ಅವರನ್ನು ನಂಬಿದವರೇ ಅಂದಿನ ಸತ್ಯನಿಷ್ಠ ಮುಸ್ಲಿಮರಾದರು. ಆದರೆ ಯಾರು ಈಸಾ ಅವರನ್ನು ನಂಬಲು ನಿರಾಕರಿಸಿ, 'ನಾವು ಮೂಸಾ ಅವರ ಧರ್ಮವನ್ನೇ ಅನುಸರಿಸುತ್ತೇವೆ' ಎಂದು ಹೇಳಿದರೋ, ಅವರು ಮುಸ್ಲಿಮರಾಗಿ ಉಳಿಯಲಿಲ್ಲ. ಏಕೆಂದರೆ ಅವರು ಅಲ್ಲಾಹನು ಕಳುಹಿಸಿದ ಪ್ರವಾದಿಯನ್ನೇ ತಿರಸ್ಕರಿಸಿದರು. ಇದೇ ರೀತಿ, ಅಲ್ಲಾಹನು ಅಂತಿಮ ಪ್ರವಾದಿಯಾಗಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರನ್ನು ಕಳುಹಿಸಿದಾಗ, ಪ್ರತಿಯೊಬ್ಬರೂ ಅವರನ್ನು ನಂಬುವುದು ಕಡ್ಡಾಯವಾಯಿತು. ಮೂಸಾ ಮತ್ತು ಈಸಾ ಅವರನ್ನು ಕಳುಹಿಸಿದ ಅದೇ ಅಲ್ಲಾಹನೇ, ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರನ್ನೂ ಅಂತಿಮ ಪ್ರವಾದಿಯಾಗಿ ಕಳುಹಿಸಿದ್ದಾನೆ.ಆದುದರಿಂದ, ಯಾರು ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರ ಸಂದೇಶವನ್ನು ತಿರಸ್ಕರಿಸಿ, 'ನಾವು ಮೂಸಾ ಅಥವಾ ಈಸಾ ಅವರನ್ನೇ ಅನುಸರಿಸುತ್ತೇವೆ' ಎಂದು ಹೇಳುತ್ತಾರೋ, ಅವರು ಮುಸ್ಲಿಮರಾಗಿರಲು ಸಾಧ್ಯವಿಲ್ಲ.
ಕೇವಲ ಮುಸ್ಲಿಮರನ್ನು ಗೌರವಿಸುತ್ತೇನೆ ಎನ್ನುವುದರಿಂದ ಅಥವಾ ದಾನಧರ್ಮ ಮಾಡಿ ಬಡವರಿಗೆ ಸಹಾಯ ಮಾಡುವುದರಿಂದ ಸ್ವರ್ಗವನ್ನು ಸೇರಲು ಸಾಧ್ಯವಿಲ್ಲ. ಸ್ವರ್ಗ ಪ್ರಾಪ್ತಿಗಾಗಿ ಅಲ್ಲಾಹನಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ಅಂತಿಮ ತೀರ್ಪಿನ ದಿನದಲ್ಲಿ ದೃಢವಾದ ನಂಬಿಕೆ ಇಡುವುದು ಅತ್ಯಗತ್ಯ. ಅಂತಹ ನಂಬಿಕೆಯ ಆಧಾರದ ಮೇಲೆ ಮಾಡಿದ ಸತ್ಕಾರ್ಯಗಳನ್ನು ಮಾತ್ರ ಅಲ್ಲಾಹನು ಸ್ವೀಕರಿಸುತ್ತಾನೆ. ಅಲ್ಲಾಹನಿಗೆ ಸರಿಸಾಟಿಯಾಗಿಸುವುದು ಮತ್ತು ಅವನನ್ನು ನಿರಾಕರಿಸುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಅದೇ ರೀತಿ, ಅಲ್ಲಾಹನು ಕಳುಹಿಸಿದ ದೈವಿಕ ಸಂದೇಶವನ್ನು ತಿರಸ್ಕರಿಸುವುದು ಅಥವಾ ಅಂತಿಮ ಪ್ರವಾದಿಯಾದ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರನ್ನು ಒಪ್ಪಿಕೊಳ್ಳದಿರುವುದು ಕೂಡ ಮಹಾಪಾಪವಾಗಿದೆ.ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರ ಆಗಮನದ ಬಗ್ಗೆ ತಿಳಿದ ನಂತರವೂ ಯಾರು ಅವರನ್ನು ನಂಬಲು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಿರಾಕರಿಸುತ್ತಾರೋ, ಅಂತಹ ಯಹೂದಿಗಳು ಮತ್ತು ಕ್ರೈಸ್ತರು ನರಕದಲ್ಲಿ ಶಾಶ್ವತವಾಗಿ ಇರುವರೆಂದು ಅಲ್ಲಾಹನು ಸ್ಪಷ್ಟಪಡಿಸಿದ್ದಾನೆ.
“ಗ್ರಂಥದವರು ಹಾಗೂ ಬಹುದೇವರಾಧಕರ ಪೈಕಿ ಸತ್ಯನಿಷೇಧಿಗಳಾಗಿರುವವರು ಖಂಡಿತವಾಗಿಯೂ ನರಕಾಗ್ನಿಯಲ್ಲಿ ಬೀಳುವರು ಮತ್ತು ಸದಾಕಾಲ ಅದರಲ್ಲಿರುವರು. ಇವರು ಅತ್ಯಂತ ನಿಕೃಷ್ಟ ಸೃಷ್ಟಿಗಳು.” [98: 6].
ಅಲ್ಲಾಹು ಮಾನವಕುಲಕ್ಕೆ ಅಂತಿಮ ಸಂದೇಶವು ಬಂದಿರುವುದರಿಂದ, ಇಸ್ಲಾಂ ಮತ್ತು ಅಂತಿಮ ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರ ಬಗ್ಗೆ ತಿಳಿದ ಪ್ರತಿಯೊಬ್ಬ ವ್ಯಕ್ತಿಯೂ ಅವರನ್ನು ನಂಬುವುದು, ಅವರ ಶರೀಯತ್ ಅನ್ನು ಅನುಸರಿಸುವುದು, ಅವರ ಆಜ್ಞೆಗಳನ್ನು ಪಾಲಿಸುವುದು ಮತ್ತು ನಿಷಿದ್ಧವಾದವುಗಳನ್ನು ತ್ಯಜಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಈ ಅಂತಿಮ ಸಂದೇಶವನ್ನು ಕೇಳಿಯೂ ಅದನ್ನು ತಿರಸ್ಕರಿಸುವವರನ್ನು ಅಲ್ಲಾಹು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ನರಕದಲ್ಲಿ ಶಿಕ್ಷೆಯನ್ನು ವಿಧಿಸುವನು. ಇದಕ್ಕೆ ಸಾಕ್ಷಿಯಾಗಿ ಕುರ್ ಆನ್ ನ ಈ ವಚನವಿದೆ:
"ಮತ್ತು ಯಾರು ಇಸ್ಲಾಂ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಬಯಸುವನೋ, ಅದು ಅವನಿಂದ ಎಂದಿಗೂ ಸ್ವೀಕರಿಸಲ್ಪಡುವುದಿಲ್ಲ ಮತ್ತು ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರುವನು." [3 : 85].
ಸರ್ವಶಕ್ತ ಅಲ್ಲಾಹು ಹೇಳುತ್ತಾನೆ: “(ಓ ಪ್ರವಾದಿಯವರೇ!) ಹೇಳಿರಿ: ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಕೆಲವರು ಕೆಲವರನ್ನು ಅಲ್ಲಾಹನ ಹೊರತಾಗಿರುವ ಪ್ರಭುಗಳನ್ನಾಗಿ ಮಾಡದಿರೋಣ. ತರುವಾಯ ಅವರೇನಾದರೂ ವಿಮುಖರಾಗುವುದಾದರೆ ನಾವು (ಅಲ್ಲಾಹನಿಗೆ) ಶರಣಾಗತರಾಗಿರುವೆವು ಎಂಬುದಕ್ಕೆ ನೀವು ಸಾಕ್ಷ್ಯ ವಹಿಸಿರಿ ಎಂದು ಅವರೊಂದಿಗೆ ಹೇಳಿರಿ. .(64 :3)
ನಾನು ಮುಸಲ್ಮಾನನಾಗಲು ಏನು ಮಾಡಬೇಕು?
ಇಸ್ಲಾಂ ಧರ್ಮದಲ್ಲಿ ಆಗಮಿಸಲು ಈ ಆರು ಸ್ಥಂಭಗಳ ಮೇಲೆ ವಿಶ್ವಾಸ ತಾಳುವುದು ಅಗತ್ಯ:
ಅಲ್ಲಾಹು ಸೃಷ್ಟಿಕರ್ತ, ಪೋಷಕ, ನಿರ್ವಾಹಕ ಮತ್ತು ಮಾಲೀಕನಾಗಿದ್ದು, ಅವನಿಗೆ ಯಾರೂ ಸಮಾನರಿಲ್ಲ, ಅವನಿಗೆ ಪತ್ನಿ ಅಥವಾ ಮಕ್ಕಳಿಲ್ಲ ಮತ್ತು ಅವನೊಬ್ಬನೇ ಆರಾಧನೆಗೆ ಅರ್ಹನೆಂದು ನಂಬುವುದು.
ದೇವದೂತರು ಅಲ್ಲಾಹನ ದಾಸರಾಗಿದ್ದು ಅವರನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ ಮತ್ತು ಪ್ರವಾದಿಗಳಿಗೆ ದಿವ್ಯವಾಣಿಯನ್ನು ತಲುಪಿಸುವುದು ಅವರ ಕಾರ್ಯವಾಗಿದೆ ಎಂದು ನಂಬುವುದು.
ಅಲ್ಲಾಹನು ತನ್ನ ಪ್ರವಾದಿಗಳಿಗೆ ನೀಡಿದ ಎಲ್ಲಾ ಗ್ರಂಥಗಳನ್ನು (ತೌರಾತ್, ಇಂಜೀಲ್ ಮುಂತಾದವು) ಮತ್ತು ಅಂತಿಮ ಗ್ರಂಥವಾದ ಕುರ್ ಆನ್ ಅನ್ನು ನಂಬುವುದು.
ನೂಹ್, ಇಬ್ರಾಹಿಂ, ಮೂಸಾ, ಈಸಾ ಮತ್ತು ಅಂತಿಮವಾಗಿ ಮುಹಮ್ಮದ್ ಸೇರಿದಂತೆ ಎಲ್ಲಾ ಪ್ರವಾದಿಗಳನ್ನು ನಂಬುವುದು ಅತ್ಯಗತ್ಯವಾಗಿದೆ. ಅವರೆಲ್ಲರೂ ಮಾನವರಾಗಿದ್ದರು ಮತ್ತು ಅಲ್ಲಾಹನಿಂದ ವಹಿಯನ್ನು (ದಿವ್ಯವಾಣಿ) ಪಡೆದಿದ್ದರು. ಅವರ ಸತ್ಯಸಂಧತೆಯನ್ನು ಸಾಬೀತುಪಡಿಸಲು ಅಲ್ಲಾಹನು ಅವರಿಗೆ ಅನೇಕ ದೃಷ್ಟಾಂತಗಳನ್ನು ಮತ್ತು ಪವಾಡಗಳನ್ನು ನೀಡಿದನು.
ಮರಣಾನಂತರ ಪ್ರವಾದಿಗಳು ಮತ್ತು ಸಾಮಾನ್ಯರೆಲ್ಲರೂ ಪುನರುತ್ಥಾನಗೊಳ್ಳುವ ದಿನದಂದು, ಅಲ್ಲಾಹನು ಎಲ್ಲರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಿ, ವಿಶ್ವಾಸಿಗಳನ್ನು ಸ್ವರ್ಗಕ್ಕೆ ಮತ್ತು ಅವಿಶ್ವಾಸಿಗಳನ್ನು ನರಕಕ್ಕೆ ಕಳುಹಿಸುವನು ಎಂದು ನಂಬುವುದು.
ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಅಲ್ಲಾಹು ಅರಿತಿದ್ದಾನೆ ಮತ್ತು ಅದು ಈಗಾಗಲೇ ನಿರ್ಧರಿಸಲ್ಪಟ್ಟಿದೆ ಎಂದು ನಂಬುವುದು. ಅಲ್ಲಾಹು ಸಕಲವನ್ನೂ ಸೃಷ್ಟಿಸಿದ್ದಾನೆ ಮತ್ತು ಎಲ್ಲವನ್ನೂ ನಿರ್ಧರಿಸಿದ್ದಾನೆ ಎಂಬ ನಂಬಿಕೆ ಇದಾಗಿದೆ.
ಇಸ್ಲಾಂ ಸೌಭಾಗ್ಯದ ಮಾರ್ಗವಾಗಿದೆ.
ಇಸ್ಲಾಂ ಎಲ್ಲಾ ಪ್ರವಾದಿಗಳ ಧರ್ಮವಾಗಿದೆ, ಇದು ಕೇವಲ ಅರಬ್ಬರ ಧರ್ಮವಲ್ಲ.
ಇಸ್ಲಾಂ ಇಹಲೋಕದಲ್ಲಿ ನಿಜವಾದ ಸಂತೋಷ ಮತ್ತು ಪರಲೋಕದಲ್ಲಿ ಶಾಶ್ವತ ಸುಖಕ್ಕೆ ದಾರಿಯಾಗಿದೆ.
ಇಸ್ಲಾಂ ಮಾನವನ ಆತ್ಮ ಮತ್ತು ದೇಹದ ಎಲ್ಲಾ ಅಗತ್ಯಗಳನ್ನು ಪೂರೈಸುವ ಹಾಗೂ ಮಾನವೀಯ ಸಮಸ್ಯೆಗಳನ್ನು ಪರಿಹರಿಸುವ ಏಕೈಕ ಧರ್ಮವಾಗಿದೆ.
ಸರ್ವಶಕ್ತ ಅಲ್ಲಾಹು ಹೇಳುತ್ತಾನೆ:
ಅವನು (ಅಲ್ಲಾಹು) ಹೇಳಿದನು: ‘ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಇತರ ಕೆಲವರಿಗೆ ಶತ್ರುಗಳಾಗಿರುವರು. ಆದರೆ ನನ್ನ ವತಿಯಿಂದ ಯಾವುದಾದರೂ ಮಾರ್ಗದರ್ಶನವು ನಿಮಗೆ ಬಂದರೆ, ಆಗ ನನ್ನ ಮಾರ್ಗದರ್ಶನವನ್ನು ಯಾರು ಅನುಸರಿಸುವನೋ ಅವನು ಪಥಭ್ರಷ್ಟನಾಗಲಾರನು ಮತ್ತು ಕಷ್ಟಪಡಲಾರನು’. .ಯಾರು ನನ್ನ ಸಂದೇಶವನ್ನು ಕಡೆಗಣಿಸಿ ವಿಮುಖನಾಗುವನೋ ಖಂಡಿತವಾಗಿಯೂ ಅವನಿಗಿರು ವುದು ಇಕ್ಕಟ್ಟಾದ ಜೀವನವಾಗಿದೆ. ಪುನರುತ್ಥಾನ ದಿನದಂದು ಅವನನ್ನು ನಾವು ಅಂಧನನ್ನಾಗಿ ಎಬ್ಬಿಸುವೆವು. .[124, 123 :20]
ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರಿಂದ ನನಗೇನು ಪ್ರಯೋಜನ?
ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರಿಂದ ಅನೇಕ ಮಹತ್ತರ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:
ಈ ಲೋಕದಲ್ಲಿ ಗೆಲುವು ಮತ್ತು ಗೌರವವನ್ನು ಪಡೆಯಲು ಮನುಷ್ಯನು ಅಲ್ಲಾಹನ ದಾಸನಾಗಬೇಕು. ಇಲ್ಲದಿದ್ದರೆ, ಅವನು ತನ್ನ ಆಸೆಗಳ, ಶೈತಾನನ ಮತ್ತು ಇಂದ್ರಿಯಗಳ ದಾಸನಾಗುವನು.
ಖಯಾಮತ್ ದಿನದಂದು ಅತ್ಯಂತ ದೊಡ್ಡ ಗೆಲುವೆಂದರೆ ನರಕದ ಶಿಕ್ಷೆಯಿಂದ ಪಾರಾಗುವುದು, ಸ್ವರ್ಗವನ್ನು ಪ್ರವೇಶಿಸುವುದು, ಅಲ್ಲಾಹನ ಸಂಪ್ರೀತಿಯನ್ನು ಪಡೆಯುವುದು ಮತ್ತು ಸ್ವರ್ಗದಲ್ಲಿ ಶಾಶ್ವತವಾಗಿ ನೆಲೆಸುವುದಾಗಿದೆ.
ಅವರು ಸ್ವರ್ಗವನ್ನು ಪ್ರವೇಶಿಸಿ ನಿತ್ಯ ಸುಖದಲ್ಲಿ ಜೀವಿಸುವರು. ಅಲ್ಲಿ ಮರಣವಾಗಲೀ, ಯಾವುದೇ ರೀತಿಯ ರೋಗ, ನೋವು, ದುಃಖ ಅಥವಾ ಮುಪ್ಪಾಗಲೀ ಇರುವುದಿಲ್ಲ ಮತ್ತು ಅವರು ಬಯಸಿದ್ದೆಲ್ಲವನ್ನೂ ಪಡೆಯುವರು.
ಸ್ವರ್ಗದಲ್ಲಿ ಯಾವ ಕಣ್ಣೂ ಕಾಣದ, ಯಾವ ಕಿವಿಯೂ ಕೇಳದ ಮತ್ತು ಮಾನವನ ಕಲ್ಪನೆಗೂ ನಿಲುಕದ ಆನಂದಗಳಿವೆ.
ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನು ಹೀಗೆ ಹೇಳುತ್ತಾನೆ: ಗಂಡಾಗಲಿ ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು. .[97 :16]
ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ನಾನು ಏನನ್ನು ಕಳೆದುಕೊಳ್ಳುತ್ತೇನೆ?
ಮನುಷ್ಯನು ಅತ್ಯಂತ ದೊಡ್ಡ ಜ್ಞಾನವನ್ನು ಕಳೆದುಕೊಳ್ಳುತ್ತಾನೆ, ಅದು ಅಲ್ಲಾಹನ ಬಗ್ಗೆ ಜ್ಞಾನ ಮತ್ತು ಅರಿವು. ಅವನು ಅಲ್ಲಾಹನಲ್ಲಿನ ನಂಬಿಕೆಯನ್ನೂ ಕಳೆದುಕೊಳ್ಳುತ್ತಾನೆ, ಅದು ಈ ಜಗತ್ತಿನಲ್ಲಿ ಭದ್ರತೆ ಮತ್ತು ಶಾಂತಿಯನ್ನು ಮತ್ತು ಪರಲೋಕದಲ್ಲಿ ನಿರಂತರ ಸುಖವನ್ನು ನೀಡುತ್ತದೆ.
ಮನುಷ್ಯನು ಅಲ್ಲಾಹನು ಮಾನವರಿಗೆ ಕಳುಹಿಸಿದ ಅತ್ಯಂತ ಮಹತ್ವದ ಪುಸ್ತಕವನ್ನು ಓದಲು ಮತ್ತು ಅದನ್ನು ನಂಬಲು ವಿಫಲನಾದರೆ ಅವನು ದೊಡ್ಡ ನಷ್ಟವನ್ನು ಅನುಭವಿಸುತ್ತಾನೆ.
ಪ್ರವಾದಿಗಳನ್ನು ನಂಬದಿದ್ದರೆ, ಸ್ವರ್ಗದಲ್ಲಿ ಅವರ ಸಹವಾಸವನ್ನು ಕಳೆದುಕೊಳ್ಳುತ್ತಾರೆ. ನರಕದಲ್ಲಿ ಶೈತಾನರು, ಅಪರಾಧಿಗಳು ಮತ್ತು ಅಧರ್ಮಿಗಳ ಸಹವಾಸದಲ್ಲಿ ಇರುತ್ತಾರೆ. ನರಕವು ಕೆಟ್ಟ ಸ್ಥಳವಾಗಿದೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
"ಹೇಳಿರಿ - ವಾಸ್ತವದಲ್ಲಿ , ಪುನರುತ್ಥಾನದ ದಿನದಂದು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾದ ದಿವಾಳಿಕೋರರು. ಅದು ಸ್ಪಷ್ಟವಾದ ನಷ್ಟವಾಗಿದೆ." ಅಗ್ನಿಯ ಕೊಡೆಗಳು ಅವರ ಮೇಲ್ಭಾಗದಲ್ಲೂ ಹರಡಿಕೊಂಡಿರುವವು ಮತ್ತು ಕೆಳಭಾಗದಲ್ಲೂ ಹರಡಿಕೊಂಡಿರುವವು. ಅಲ್ಲಾಹನು ತನ್ನ ದಾಸರನ್ನು ಎಚ್ಚರಿಸುತ್ತಿರುವುದು ಈ ಅಂತಿಮ ಗತಿಯ ಕುರಿತೇ ಆಗಿದೆ, ಆದುದರಿಂದ, 'ನನ್ನ ದಾಸರೇ ನನ್ನ ಕ್ರೋಧವನ್ನು ಭಯಪಡಿರಿ'. .[16, 15:39]
ನಿರ್ಧಾರವನ್ನು ವಿಳಂಬ ಮಾಡಬೇಡಿ!
ಜಗತ್ತು ಶಾಶ್ವತೆಯ ವಾಸಸ್ಥಾನವಲ್ಲ ...
ಅದರಿಂದ ಎಲ್ಲ ಸೌಂದರ್ಯವೂ ಮಾಯವಾಗುತ್ತದೆ ಮತ್ತು ಕಾಮವೆಲ್ಲ ನಶಿಸಿಹೋಗುತ್ತದೆ...
ನೀವು ಮಾಡಿದ ಪ್ರತಿಯೊಂದು ಕೆಲಸಕ್ಕೂ ನೀವು ಉತ್ತರ ನೀಡಬೇಕಾದ ದಿನ ಬರುತ್ತದೆ. ಅದು ಖಯಾಮತ್ ದಿನ. ಅಲ್ಲಾಹು ಹೇಳಿದ್ದಾನೆ: { ಮತ್ತು ಕರ್ಮಪತ್ರವು ಮುಂದಿರಿಸಲ್ಪಡುವುದು. ಆಗ ಅಪರಾಧಿಗಳು ತಮ್ಮ ಜೀವನ ಗ್ರಂಥದಲ್ಲಿ ಅಡಕವಾಗಿರುವುದರ ಬಗ್ಗೆ ಭಯಭೀತರಾಗಿ, " ಅಯ್ಯೋ ನಮ್ಮ ದುರ್ಗತಿಯೇ, ಇದೆಂತಹ ಗ್ರಂಥ! ನಮ್ಮ ಯಾವುದೇ ಚಿಕ್ಕ ಹಾಗೂ ದೊಡ್ಡ ಕೃತ್ಯವು ಇದರಲ್ಲಿ ಲಿಖಿತಗೊಳ್ಳದೆ ಬಿಟ್ಟು ಹೋಗಿಲ್ಲವಲ್ಲಾ" ಎಂದು ಹೇಳುತ್ತಿರುವುದನ್ನು ನೀವು ಕಾಣುವಿರಿ. ಅವರು ಏನೆಲ್ಲ ಮಾಡಿದ್ದರೋ ಅವೆಲ್ಲವನ್ನೂ ತಮ್ಮ ಮುಂದೆ ಕಾಣುವರು ಮತ್ತು ನಿಮ್ಮ ಪ್ರಭು ಯಾರ ಮೇಲೂ ಕಿಂಚಿತ್ತೂ ಅಕ್ರಮವೆಸಗಲಾರನು.} .[49 :18]
ಮತ್ತು ಅಲ್ಲಾಹು ಸ್ವತಃ ಹೇಳಿದ್ದಾನೆ, ಯಾರು ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಿಲ್ಲವೋ ಅವನಿಗೆ ನರಕದಲ್ಲಿ ಶಾಶ್ವತವಾಗಿ ಇರುವುದು ಖಚಿತ.
ನಷ್ಟವು ಸಣ್ಣದಲ್ಲ, ಬದಲಾಗಿ ಅದು ದೊಡ್ಡದಾಗಿದೆ “ಯಾರಾದರೂ ಇಸ್ಲಾಮಿಗೆ (ಅಲ್ಲಾಹನಿಗಿರುವ ಶರಣಾಗತಿಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.” .[85 : 3]
ಇಸ್ಲಾಂ ಒಂದೇ ನಿಜವಾದ ಧರ್ಮ, ಅಲ್ಲಾಹನು ಅದನ್ನೇ ಸ್ವೀಕರಿಸುತ್ತಾನೆ.
ಅಲ್ಲಾಹನು ನಮ್ಮನ್ನು ಸೃಷ್ಟಿಸಿದನು ಮತ್ತು ಅವನ ಬಳಿಗೆ ನಾವು ಹಿಂತಿರುಗುತ್ತೇವೆ ಮತ್ತು ಈ ಜಗತ್ತು ನಮಗೆ ಒಂದು ಪರೀಕ್ಷೆಯಾಗಿದೆ.
ಧೃಡವಾಗಿ ನಂಬಿರಿ: ಈ ಜೀವನವು ಕನಸಿನಂತೆ ಚಿಕ್ಕದಾಗಿದೆ ... ಮತ್ತು ಅವನು ಯಾವಾಗ ಸಾಯುತ್ತಾನೆ ಎಂದು ಯಾರಿಗೂ ತಿಳಿದಿಲ್ಲ!
ಪುನರುತ್ಥಾನದ ದಿನದಂದು ನಿಮ್ಮ ಸೃಷ್ಟಿಕರ್ತನು ನಿಮ್ಮನ್ನು ಕೇಳಿದರೆ ನಿಮ್ಮ ಉತ್ತರವೇನು: ನೀವು ಸತ್ಯವನ್ನು ಏಕೆ ಅನುಸರಿಸಲಿಲ್ಲ? ನೀವು ಅಂತಿಮ ಪ್ರವಾದಿಯನ್ನು ಏಕೆ ಅನುಸರಿಸಲಿಲ್ಲ?
ನೀವು ಯಾವ ಉತ್ತರವನ್ನು ನಿಮ್ಮ ರಬ್ಬಿಗೆ ನೀಡುವಿರಿ, ಇಸ್ಲಾಂ ಬಿಟ್ಟು ಕುಫ್ರ್ ಅನುಸರಿಸಿದ ಪರಿಣಾಮಗಳ ಬಗ್ಗೆ ಅವನು ನಿಮ್ಮನ್ನು ಎಚ್ಚರಿಸಿಲ್ಲವೇ ಮತ್ತು ಕಾಫಿರರ ಅಂತಿಮ ಗಮ್ಯಸ್ಥಾನವು ಶಾಶ್ವತ ನರಕ ಎಂದು ನಿಮಗೆ ತಿಳಿಸಿಲ್ಲವೇ?
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತ ಗಳನ್ನು ನಿಷೇಧಿಸಿದವರು ಯಾರೋ ಅವರು ನರಕವಾಸಿಗ ಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು’. .[39 :2]
ಸತ್ಯವನ್ನು ಬಿಟ್ಟು ತಂದೆ-ತಾತಂದಿರ ಮಾರ್ಗವನ್ನು ಅನುಸರಿಸುವವರಿಗೆ ಯಾವುದೇ ನ್ಯಾಯವಾದ ಕಾರಣವಿರುವುದಿಲ್ಲ.
ಅನೇಕ ಜನರು ತಾವು ಜೀವಿಸುವ ತಮ್ಮ ಸುತ್ತಲಿನ ಪರಿಸರದ ಭಯದಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಹಿಂಜರಿಯುತ್ತಾರೆಂದು ಅಲ್ಲಾಹು ನಮಗೆ ತಿಳಿಸಿದ್ದಾನೆ.
ಅನೇಕರು ತಮ್ಮ ಪೂರ್ವಜರಿಂದ ಪಡೆದ ಮತ್ತು ಅಭ್ಯಾಸ ಮಾಡಿಕೊಂಡ ನಂಬಿಕೆಗಳನ್ನು ಬದಲಾಯಿಸಲು ಇಷ್ಟವಿಲ್ಲದ ಕಾರಣ ಇಸ್ಲಾಂ ಧರ್ಮವನ್ನು ತಿರಸ್ಕರಿಸುತ್ತಾರೆ. ಅವರಲ್ಲಿ ಅನೇಕರು ತಮ್ಮ ಪೂರ್ವಜರಿಂದ ಪಡೆದ ತಪ್ಪು ನಂಬಿಕೆಗಳ ಬಗ್ಗೆ ತೀವ್ರವಾದ ಅಂಧಭಕ್ತಿ ಮತ್ತು ಪಕ್ಷಪಾತ ಹೊಂದಿರುವುದರಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಹಿಂಜರಿಯುತ್ತಾರೆ.
ಇವರೆಲ್ಲರಿಗೆ ಯಾವುದೇ ನೆಪವಿಲ್ಲ, ಮತ್ತು ಇವರು ಅಲ್ಲಾಹನ ಮುಂದೆ ನಿಂತಾಗ ಇವರಿಗೆ ಯಾವುದೇ ಪುರಾವೆ ಕಾಣುವುದಿಲ್ಲ.
"ಒಬ್ಬ ನಾಸ್ತಿಕನು, 'ನಾನು ನಾಸ್ತಿಕ ಕುಟುಂಬದಲ್ಲಿ ಹುಟ್ಟಿದ್ದರಿಂದ ನಾನು ನಾಸ್ತಿಕನಾಗಿರುತ್ತೇನೆ' ಎಂದು ಹೇಳುವುದು ಸಮಂಜಸವಲ್ಲ. ಏಕೆಂದರೆ, ಅಲ್ಲಾಹು ಅವನಿಗೆ ನೀಡಿರುವ ಬುದ್ಧಿಯನ್ನು ಬಳಸಿಕೊಂಡು ಆಕಾಶ ಮತ್ತು ಭೂಮಿಯ ಮಹತ್ವವನ್ನು ಅವನು ಚಿಂತಿಸಬೇಕು. ತನ್ನ ಸೃಷ್ಟಿಕರ್ತನು ತನಗೆ ಕೊಟ್ಟ ಬುದ್ಧಿಯನ್ನು ಬಳಸಿಕೊಂಡು ಈ ವಿಶ್ವಕ್ಕೆ ಒಬ್ಬ ಸೃಷ್ಟಿಕರ್ತ ಇದ್ದಾನೆ ಎಂಬುದನ್ನು ಅವನು ಅರಿತುಕೊಳ್ಳಬೇಕು. ಅದೇ ರೀತಿ, ಕಲ್ಲು ಮತ್ತು ವಿಗ್ರಹಗಳನ್ನು ಆರಾಧಿಸುವವರು ತಮ್ಮ ಪೂರ್ವಜರನ್ನು ಅನುಕರಿಸುತ್ತೇನೆ ಎಂದು ಹೇಳುವುದು ಸಮಂಜಸವಲ್ಲ. ಅವರು ಸತ್ಯವನ್ನು ಹುಡುಕಬೇಕು ಮತ್ತು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು: ನನ್ನನ್ನು ಕೇಳದ, ನನ್ನನ್ನು ನೋಡದ, ನನಗೆ ಯಾವುದೇ ಪ್ರಯೋಜನವನ್ನು ನೀಡದ ಒಂದು ನಿರ್ಜೀವ ವಸ್ತುವನ್ನು ನಾನು ಹೇಗೆ ಆರಾಧಿಸಬಹುದು?!
ಹಾಗೆಯೇ, ಪ್ರಕೃತಿ ಮತ್ತು ತರ್ಕಕ್ಕೆ ವಿರುದ್ಧವಾದ ವಿಷಯಗಳನ್ನು ನಂಬುವ ಕ್ರೈಸ್ತನು ತನ್ನನ್ನು ತಾನೇ ಕೇಳಿಕೊಳ್ಳಬೇಕು: ಇತರ ಜನರ ಪಾಪಗಳಿಗಾಗಿ ಯಾವುದೇ ಪಾಪ ಮಾಡದ ತನ್ನ ಮಗನನ್ನು ದೇವರು ಹೇಗೆ ಕೊಲ್ಲಬಹುದು? ಇದು ಅನ್ಯಾಯವಲ್ಲವೇ? ದೇವರ ಮಗನನ್ನು ಮನುಷ್ಯರು ಹೇಗೆ ಶಿಲುಬೆಗೇರಿಸಿ ಕೊಲ್ಲಬಹುದು? ತನ್ನ ಮಗನನ್ನು ಕೊಲ್ಲಲು ಅವಕಾಶ ಮಾಡಿಕೊಡದೆ ಮಾನವಕುಲದ ಪಾಪಗಳನ್ನು ಕ್ಷಮಿಸಲು ದೇವರು ಸಮರ್ಥನಲ್ಲವೇ? ತನ್ನ ಮಗನನ್ನು ರಕ್ಷಿಸಲು ದೇವರು ಸಮರ್ಥನಲ್ಲವೇ?
ಈ ವಾಕ್ಯವು ನಮಗೆ ಬುದ್ಧಿವಂತ ವ್ಯಕ್ತಿಯು ಸ್ವತಃ ಯೋಚಿಸಿ ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ಹೇಳುತ್ತದೆ. ಕೇವಲ ತಂದೆ-ತಾಯಿ ಅಥವಾ ಹಿರಿಯರು ಮಾಡುತ್ತಿರುವುದನ್ನು ಅನುಕರಿಸುವುದು ತಪ್ಪು ಎಂದು ಸೂಚಿಸುತ್ತದೆ. ಸತ್ಯವೇ ಮುಖ್ಯ ಎಂದು ಒತ್ತಿಹೇಳುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: {ಅಲ್ಲಾಹನು ಅವತೀರ್ಣಗೊಳಿಸಿದ ಶಾಸನದ ಕಡೆಗೂ ಆತನ ಸಂದೇಶವಾಹಕರ ಕಡೆಗೂ ಬನ್ನಿರಿ" ಎಂದು ಅವರೊಡನೆ ಹೇಳಿದಾಗ ಅವರು. "ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೆವೋ ಅದೇ ನಮಗೆ ಸಾಕು" ಎಂದು ಹೇಳುತ್ತಾರೆ. ಪೂರ್ವಿಕರು ಏನು ಅರಿತಿದ್ದರೂ ಮತ್ತು ಅವರಿಗೆ ಸನ್ಮಾರ್ಗದ ಅರಿವೇ ಇಲ್ಲದಿದ್ದರೂ ಇವರು ಅವರನ್ನೇ ಅನುಕರಿಸುತ್ತಲಿರುವರೇ?} [104 : 5].
ಯಾರು ಮುಸ್ಲಿಮರಾಗಲು ಬಯಸುತ್ತಾರೆ ಮತ್ತು ತಮ್ಮ ಸಂಬಂಧಿಕರಿಂದ ಹಾನಿಯಾಗುವ ಭಯದಲ್ಲಿದ್ದಾರೆ ಅವರು ಏನು ಮಾಡಬೇಕು?
ಯಾರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸುತ್ತಾರೆ ಆದರೆ ತಮ್ಮ ಸುತ್ತಲಿನ ಪರಿಸರದಿಂದ ಭಯಪಡುತ್ತಾರೆ, ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಅವರಿಗೆ ಸ್ವತಂತ್ರವಾಗಿ ತಮ್ಮ ಇಸ್ಲಾಂ ಧರ್ಮವನ್ನು ಬಹಿರಂಗಪಡಿಸಲು ಸುಲಭ ಹಾದಿ ತೋರಿಸುವವರೆಗೆ ಅದನ್ನು ಗುಟ್ಟಾಗಿ ಇಡಬಹುದು.
ನೀವು ತಕ್ಷಣವೇ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ನಿಮ್ಮ ಕರ್ತವ್ಯ. ಆದರೆ, ನಿಮ್ಮ ಸುತ್ತಲಿನವರಿಗೆ ನಿಮ್ಮ ಇಸ್ಲಾಂ ಧರ್ಮವನ್ನು ಹೇಳುವ ಅಥವಾ ಅದನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ನಿಮ್ಮ ಮೇಲೆ ಯಾವುದೇ ಹಾನಿಯಾಗುವ ಸಾಧ್ಯತೆ ಇದ್ದರೆ ಅದನ್ನು ಮಾಡಬೇಡಿ.
ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಕೋಟ್ಯಾಂತರ ಮುಸ್ಲಿಮರ ಸಹೋದರರಾಗುತ್ತೀರಿ ಎಂಬುದನ್ನು ನೆನಪಿಡಿ. ನಿಮ್ಮ ದೇಶದಲ್ಲಿರುವ ಮಸೀದಿ ಅಥವಾ ಇಸ್ಲಾಮಿಕ್ ಕೇಂದ್ರದೊಂದಿಗೆ ಸಂಪರ್ಕಿಸಿ, ಅವರಿಂದ ಮಾರ್ಗದರ್ಶನ ಮತ್ತು ಸಹಾಯವನ್ನು ಕೇಳಬಹುದು. ಅವರು ಇದಕ್ಕೆ ಸಂತೋಷಪಡುತ್ತಾರೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
{ಮತ್ತು ಯಾರಾ ದರೂ ಅಲ್ಲಾಹುವನ್ನು ಭಯಪಡುವುದಾದರೆ ಅಲ್ಲಾಹು ಅವನಿಗೆ ಹೊರಹೋಗುವ ಒಂದು ಮಾರ್ಗವನ್ನು ಮಾಡಿಕೊಡುವನು ಅವನು ಊಹಿಸಿರದ ವಿಧದಲ್ಲಿ ಅವನಿಗೆ ಅನ್ನಾಧಾರವನ್ನು ಒದಗಿಸುವನು} [3 ,2 :65]
ಓ ಪ್ರಿಯ ಓದುಗರೇ
ನಿಮ್ಮ ಸೃಷ್ಟಿಕರ್ತನಾದ ಅಲ್ಲಾಹನನ್ನು ಸಂತೋಷಪಡಿಸುವುದು, -ನಿಮ್ಮ ಮೇಲೆ ಎಲ್ಲಾ ಅನುಗ್ರಹಗಳನ್ನು ವರ್ಷಿಸಿದವನು, ನೀವು ಅಮ್ಮನ ಗರ್ಭದಲ್ಲಿರುವಾಗ ಆಹಾರವನ್ನು ನೀಡಿದವನು ಮತ್ತು ಈಗ ನೀವು ಉಸಿರಾಡುವ ಗಾಳಿಯನ್ನು ನೀಡುವವನು- ನಿಮ್ಮ ಮೇಲೆ ಇರುವ ಜನರ ಸಂತೋಷಕ್ಕಿಂತ ಹೆಚ್ಚು ಮುಖ್ಯವಲ್ಲವೇ?
"ಈ ಪ್ರಪಂಚದ ಮತ್ತು ಪರಲೋಕದ ಯಶಸ್ಸು, ಈ ಕ್ಷಣಿಕ ಜೀವನದ ಸುಖಗಳನ್ನು ಬಿಟ್ಟುಕೊಡುವುದಕ್ಕೆ ಯೋಗ್ಯವಲ್ಲವೇ? ಖಂಡಿತವಾಗಿಯೂ, ಹೌದು ಅಲ್ಲಾಹನ ಮೇಲಾಣೆ!
ನಿನ್ನ ಗತ ಜೀವನವು ನಿನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಮತ್ತು ನೀನು ಸರಿಯಾದ ಹಾದಿಗೆ ಬರುವುದನ್ನು ತಡೆಯಬಾರದು.
ಇಂದೇ ನಿಜವಾದ ಸತ್ಯ ವಿಶ್ವಾಸಿಯಾಗು ಸತ್ಯದ ಹಾದಿಯಿಂದ ನಿನ್ನನ್ನು ದೂರ ಮಾಡಲು ಶೈತಾನನಿಗೆ ಅವಕಾಶ ನೀಡಬೇಡ!
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
“ಓ ಮನುಷ್ಯರೇ! ಖಂಡಿತವಾಗಿಯೂ ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿದೆ. ನಾವು ನಿಮಗೆ ಸ್ಪಷ್ಟವಾದ ಒಂದು ಪ್ರಕಾಶವನ್ನು ಇಳಿಸಿ ಕೊಟ್ಟಿದ್ದೇವೆ.”(174) ಇನ್ನು ಯಾರು ಅಲ್ಲಾಹುವಿನಲ್ಲಿ ವಿಶ್ವಾಸವಿಡು ವನೋ ಮತ್ತು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳು ವನೋ ಅವರನ್ನು ಅವನು ತನ್ನ ಕಾರುಣ್ಯದಲ್ಲಿ ಮತ್ತು ಅನುಗ್ರಹದಲ್ಲಿ ಪ್ರವೇಶ ಮಾಡಿಸುವನು. ಅವರನ್ನು ಅವನು ನೇರ ಮಾರ್ಗದಲ್ಲಿ ತನ್ನೆಡೆಗೆ ಮುನ್ನಡೆಸುವನು (175). [4: 174 ,175].
ನೀವು ನಿಮ್ಮ ಜೀವನದ ಅತ್ಯಂತ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಾ?
ನೀವು ಈ ಎಲ್ಲವನ್ನೂ ತಾರ್ಕಿಕವಾಗಿ ಒಪ್ಪಿಕೊಂಡಿದ್ದೀರಿ ಮತ್ತು ನಿಮ್ಮ ಹೃದಯದಲ್ಲಿ ಸತ್ಯವನ್ನು ಒಪ್ಪಿಕೊಂಡಿದ್ದೀರಿ ಎಂದು ಭಾವಿಸಿದರೆ, ನೀವು ಮುಸ್ಲಿಮರಾಗುವ ನಿರ್ದೇಶನದಲ್ಲಿ ಮೊದಲ ಹೆಜ್ಜೆಯನ್ನು ಇಡಬೇಕು. ನಿಮ್ಮ ಜೀವನದ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ನಿಮಗೆ ಸಹಾಯ ಮಾಡಬೇಕೆಂದು ಮತ್ತು ಮುಸ್ಲಿಂ ಆಗಲು ಹೇಗೆ ಮಾರ್ಗದರ್ಶನ ನೀಡಬೇಕೆಂದು ನೀವು ಬಯಸುತ್ತೀರಾ?
ಇಸ್ಲಾಂ ಧರ್ಮ ಸ್ವೀಕರಿಸಲು ನಿಮ್ಮ ಪಾಪಗಳು ತಡೆಗೋಡೆ ಯಾಗದಿರಲಿ. ಅಲ್ಲಾಹು ಕುರ್ ಆನ್ನಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ, ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ತನ್ನ ರಬ್ಬಿನೆಡೆಗೆ ಪಶ್ಚಾತಾಪಟ್ಟರೆ ಅವನ ಎಲ್ಲಾ ಪಾಪಗಳನ್ನು ಅವನು ಕ್ಷಮಿಸುತ್ತಾನೆ. ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರವೂ ನಿಮ್ಮಿಂದ ಕೆಲವು ತಪ್ಪುಗಳು ಸಂಭವಿಸಬಹುದು, ಏಕೆಂದರೆ ನಾವು ಮನುಷ್ಯರು, ಪಾಪಮುಕ್ತ ದೇವಚರರಲ್ಲ ಆದರೆ ನಾವು ಅಲ್ಲಾಹುವಿನ ಬಳಿ ಕ್ಷಮೆ ಕೇಳಿ ಪಶ್ಚಾತಾಪ ಪಡಬೇಕು. ನೀವು ಸತ್ಯವನ್ನು ಸ್ವೀಕರಿಸಿ ಶಹಾದತ್ತಿನ ವಚನ ಹೇಳಿ ಇಸ್ಲಾಂ ಧರ್ಮಕ್ಕೆ ಪ್ರವೇಶಿಸಿದರೆ ಅಲ್ಲಾಹು ನಿಮಗೆ ಇತರ ಪಾಪಗಳನ್ನು ಬಿಡಲು ಸಹಾಯ ಮಾಡುತ್ತಾನೆ. ಅಲ್ಲಾಹುನನ್ನು ಸಮೀಪಿಸುವ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುವ ವ್ಯಕ್ತಿಯನ್ನು ಅಲ್ಲಾಹು ಹೆಚ್ಚಿನ ಒಳಿತಿನ ಕಾರ್ಯಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಆದ್ದರಿಂದ ಇನ್ನೂ ಯೋಚಿಸಬೇಡಿ, ಈಗಲೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿ.
ಇದಕ್ಕೆ ಪುರಾವೆಯಾಗಿ ಸರ್ವಶಕ್ತನಾದ ಅಲ್ಲಾಹನ ವಚನವು ಹೀಗಿದೆ: ಅವರು ನಿಲ್ಲಿಸುವುದಾದರೆ ಅವರು ಮುಂಚೆ ಮಾಡಿರುವುದನ್ನು ಅವರಿಗೆ ಕ್ಷಮಿಸಿ ಬಿಡಲಾಗುವುದು ಎಂದು ಸತ್ಯನಿಷೇಧಿಗಳೊಂದಿಗೆ ಹೇಳಿರಿ. .[8:38]
ನಾನು ಮುಸ್ಲಿಮನಾಗಲು ಏನು ಮಾಡಬೇಕು?
"ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಬಹಳ ಸರಳ. ಇದಕ್ಕೆ ಯಾವುದೇ ವಿಶೇಷ ಆಚರಣೆ, ಅಧಿಕೃತ ಸಮಾರಂಭ ಅಥವಾ ಸಾಕ್ಷಿಗಳ ಅಗತ್ಯವಿಲ್ಲ. ವ್ಯಕ್ತಿಯು ಪೂರ್ಣ ನಂಬಿಕೆಯಿಂದ, ಅರ್ಥವನ್ನು ಅರಿತುಕೊಂಡು 'ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ ರಸೂಲುಲ್ಲಾಹ್' ಎಂದು ಹೇಳಬೇಕು. ಅಂದರೆ, 'ಅಲ್ಲಾಹನೊಬ್ಬನೇ ದೇವರು ಮತ್ತು ಮುಹಮ್ಮದರು ಅವನ ಸಂದೇಶವಾಹಕರು' ಎಂದು ಸಾಕ್ಷಿ ನುಡಿಯಬೇಕು. ಇದನ್ನು ಅರೇಬಿಕ್ ಭಾಷೆಯಲ್ಲಿ ಹೇಳುವುದು ಉತ್ತಮ; ಆದರೆ ಅದು ಕಷ್ಟವಾದರೆ ನಿಮ್ಮ ಭಾಷೆಯಲ್ಲೇ ಹೇಳಬಹುದು. ಇಷ್ಟು ಮಾಡಿದರೆ ನೀವು ಮುಸ್ಲಿಮರಾಗುತ್ತೀರಿ. ನಂತರ ಧರ್ಮದ ಕುರಿತು ಕಲಿಯುವುದು ಮುಖ್ಯ. ಇದು ನಿಮಗೆ ಈ ಜೀವನದಲ್ಲಿ ನೆಮ್ಮದಿ ಮತ್ತು ಪರಲೋಕದಲ್ಲಿ ರಕ್ಷಣೆಯನ್ನು ನೀಡುತ್ತದೆ."
"ಇಸ್ಲಾಮಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಲು ನಾನು ನಿಮಗೆ ಸಲಹೆ ನೀಡುತ್ತೇನೆ:"
ಪವಿತ್ರ ಕುರಾನ್ನ ಅರ್ಥಗಳನ್ನು ಭಾಷೆಗೆ ಭಾಷಾಂತರಿಸಲು ಲಿಂಕ್...:
ಇಸ್ಲಾಂ ಧರ್ಮವನ್ನು ಹೇಗೆ ಅಭ್ಯಾಸ ಮಾಡುವುದು ಎಂದು ತಿಳಿಯಲು, ನೀವು ವೆಬ್ಸೈಟ್ಗೆ ಭೇಟಿ ನೀಡುವಂತೆ ನಾವು ನಿಮಗೆ ಶಿಫಾರಸ್ಸು ಮಾಡುತ್ತೇವೆ: