21 : 101
إِنَّ ٱلَّذِينَ سَبَقَتۡ لَهُم مِّنَّا ٱلۡحُسۡنَىٰٓ أُوْلَٰٓئِكَ عَنۡهَا مُبۡعَدُونَ
ನಿಶ್ಚಯವಾಗಿಯೂ, ನಮ್ಮ ಕಡೆಯಿಂದ ಯಾರಿಗೆ ಒಳಿತನ್ನು ಮೊದಲೇ ನೀಡಲಾಗಿದೆಯೋ ಅವರನ್ನು ಅದರಿಂದ (ನರಕದಿಂದ) ದೂರವಿರಿಸಲಾಗುವುದು.
Explanation & meanings · 1
- ಜನರು ಆರಾಧಿಸುತ್ತಿರುವ ದೇವರುಗಳಲ್ಲಿ ಪ್ರವಾದಿಗಳು, ದೇವದೂತರುಗಳು ಮತ್ತು ಮಹಾಪುರುಷರು ಕೂಡ ಒಳಪಡುವುದರಿಂದ ಇವರು ಕೂಡ ಅವರೊಡನೆ ನರಕಕ್ಕೆ ಹೋಗುವರೇ? ಎಂಬ ಸಂಶಯ ಉದ್ಭವವಾಗುತ್ತದೆ. ಇದಕ್ಕೆ ಈ ವಚನದಲ್ಲಿ ಉತ್ತರ ನೀಡಲಾಗಿದೆ. ಅಂದರೆ, ಅವರು ನರಕಕ್ಕೆ ಹೋಗುವುದಿಲ್ಲ. ಏಕೆಂದರೆ ಅವರು ಅಲ್ಲಾಹನ ನಿಷ್ಠ ದಾಸರು. ಅವನನ್ನು ಮಾತ್ರ ಆರಾಧಿಸುವವರು. ಜನರು ಅವರನ್ನು ಆರಾಧಿಸುತ್ತಿರುವುದು ಅವರ ಒಪ್ಪಿಗೆಯಿಂದಲ್ಲ; ಬದಲಾಗಿ, ಅವರ ಇಚ್ಛೆಗೆ ವಿರುದ್ಧವಾಗಿ ಜನರು ಅವರನ್ನು ಆರಾಧಿಸುತ್ತಿದ್ದಾರೆ.