15 : 15
لَقَالُوٓاْ إِنَّمَا سُكِّرَتۡ أَبۡصَٰرُنَا بَلۡ نَحۡنُ قَوۡمٞ مَّسۡحُورُونَ
ಅವರು ಹೇಳುವರು: “ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ. ಅಲ್ಲ, ನಮಗೆ ಮಾಟ ಮಾಡಲಾಗಿದೆ.”
Explanation & meanings · 1
- ದೇವದೂತರು ಬರಬೇಕು ಎಂದು ಸತ್ಯನಿಷೇಧಿಗಳು ಆಗ್ರಹಿಸುವುದು ಕೇವಲ ಸತ್ಯವಿಶ್ವಾಸಿಗಳಾಗುವುದರಿಂದ ನುಣುಚಿಕೊಳ್ಳಲು ಮಾತ್ರ. ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿ ಹೋಗಿ ಅಲ್ಲಿನ ಸ್ಥಿತಿಗಳನ್ನು ಕಣ್ಣಾರೆ ನೋಡಿದರೂ ಅವರು ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಿಲ್ಲ. ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ ಅಥವಾ ನಮಗೆ ಮಾಟ ಮಾಡಲಾಗಿದೆ ಎಂದೇ ಅವರು ಹೇಳುವರು.